ಮೈಸೂರು : ನಗರದ ಪುರಭವನದಲ್ಲಿ ಭಾನುವಾರ ಸಂಜೆ ಪೊಲೀಸರ ಗಸ್ತಿನೊಂದಿಗೆ, ಬ್ಯಾಂಡ್ಸೆಟ್ ಮೆರವಣಿಗೆ ಮೂಲಕ ರಾಷ್ಟ್ರಪತಿ, ಸಚಿವರು ಮತ್ತು ಶಾಸಕರರು ಪುರಭವನ ಪ್ರವೇಶಿಸಿದ್ದನ್ನು ಕಂಡು ಕೆಲಕಾಲ ಸಾರ್ವಜನಿಕರು ದಂಗಾದರು.
ಭಾನುವಾರ ಸಂಜೆ ಪುರಭವನದಲ್ಲಿ ಮೈಸೂರು ತಾಲ್ಲೂಕು ವರುಣಾ ಹೋಬಳಿ ಹಡಜನ, ಚೋರನಹಳ್ಳಿ ಮತ್ತಿತರ ಗ್ರಾಮದ ಯುವಕರು ಅಭಿನಯಿಸಿದ ರತ್ನ ಮಾಂಗಲ್ಯ ಅಥವಾ ಮರಳಿ ಬಂದ ಮಾಂಗಲ್ಯ ಸಾಮಾಜಿಕ ನಾಟಕವನ್ನು ವೀಕ್ಷಿಸಲು ಥೇಟ್ ಅಸಲಿ ಪೊಲೀಸರು, ಗಣ್ಯರ ವೇಷತೊಟ್ಟ ಎರಡೂ ಗ್ರಾಮದ ಕೆಲವು ಮುಖಂಡರು ಮೆರವಣಿಗೆ ಮೂಲಕ ಪುರಭವನ ಪ್ರವೇಶಿಸಿ ಸಾರ್ವಜನಿಕರನ್ನು ದಂಗಾಗಿಸಿದರು.
ರಾಷ್ಟ್ರಪತಿಯಾಗಿ ಗುರುಸ್ವಾಮಿ, ರಾಷ್ಟ್ರಪತಿ ಅಂಗರಕ್ಷಕರಾಗಿ ಯಶವಂತ್ ಮತ್ತು ವಿಜಯ್, ಶಾಸಕರಾಗಿ ಅಂಬಳೆ ಶಿವಣ್ಣ, ಮಂಜು ನಟಿಸಿದ್ದರು.
0 ಕಾಮೆಂಟ್ಗಳು