ಮೈಸೂರು : ರಾಷ್ಟಿçÃಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ನೀಟ್-ಯುಜಿ) 2026ರ ಫಲಿತಾಂಶದಲ್ಲಿ ಮೈಸೂರಿನ ವಿದ್ಯಾರ್ಥಿನಿ ಧನ್ಯಾ ಮಿತ್ತಲ್ ಅವರು ಆಲ್ ಇಂಡಿಯಾ ರ್ಯಾಂಕ್ (ಆಲ್ ಇಂಡಿಯಾ ರ್ಯಾಂಕ್) 4416 ಗಳಿಸಿ ನಗರ ಟಾಪರ್ ಆಗಿ ಹೊರಹೊಮ್ಮಿದ್ದಾರೆ ಎಂದು ಆಕಾಶ್ ಎಜುಕೇಷನಲ್ ಸರ್ವಿಸಸ್ ಲಿಮಿಟೆಡ್ ತಿಳಿಸಿದೆ.
ಸಂಸ್ಥೆಯ ಮೈಸೂರು ಶಾಖೆಯ ಕ್ಲಾಸ್ರೂಮ್ ಕಾರ್ಯಕ್ರಮದ ವಿದ್ಯಾರ್ಥಿನಿಯಾಗಿರುವ ಧನ್ಯಾ ಮಿತ್ತಲ್ ಅವರ ಸಾಧನೆಗೆ ಸಂಸ್ಥೆ ಅಭಿನಂದನೆ ಸಲ್ಲಿಸಿದ್ದು, ಅವರ ನಿರಂತರ ಪರಿಶ್ರಮ, ಶಿಸ್ತುಬದ್ಧ ಅಧ್ಯಯನ ಹಾಗೂ ಅನುಭವಿ ಬೋಧಕರ ಮಾರ್ಗದರ್ಶನವೇ ಈ ಯಶಸ್ಸಿಗೆ ಪ್ರಮುಖ ಕಾರಣವಾಗಿದೆ ಎಂದು ಹೇಳಿದೆ.
ಶನಿವಾರ ಸಂಸ್ಥೆಯ ಸಭಾಂಗಣದಲ್ಲಿ ನಡೆದ ಸನ್ಮಾನ ಸಮಾರಂಭದಲ್ಲಿ ಸಂಸ್ಥೆಯ ಮುಖ್ಯಸ್ಥರು ಮಾತನಾಡಿದರು.
ಸಂಸ್ಥೆಯ ಪ್ರಕಾರ, ನೀಟ್-ಯುಜಿ 2026ರ ಫಲಿತಾಂಶದಲ್ಲಿ ಆಕಾಶ್ ವಿದ್ಯಾರ್ಥಿಗಳು ರಾಷ್ಟçಮಟ್ಟದಲ್ಲೂ ಉತ್ತಮ ಸಾಧನೆ ಮಾಡಿದ್ದಾರೆ. ಟಾಪ್ 10ರಲ್ಲಿ ನಾಲ್ವರು, ಟಾಪ್ 50ರಲ್ಲಿ 18 ಮಂದಿ ಹಾಗೂ ಟಾಪ್ 100ರಲ್ಲಿ 41 ಅಭ್ಯರ್ಥಿಗಳು ಸ್ಥಾನ ಪಡೆದಿದ್ದಾರೆ. ಈ ಮೂಲಕ ವೈದ್ಯಕೀಯ ಪ್ರವೇಶ ಪರೀಕ್ಷೆಗಳ ತರಬೇತಿಯಲ್ಲಿ ಸಂಸ್ಥೆ ತನ್ನ ಸಾಧನೆಯ ಪರಂಪರೆ ಮುಂದುವರಿಸಿದೆ ಎಂದು ಪ್ರಕಟಣೆ ತಿಳಿಸಿದೆ.
ತಮ್ಮ ಸಾಧನೆ ಕುರಿತು ಪ್ರತಿಕ್ರಿಯಿಸಿರುವ ಧನ್ಯಾ ಮಿತ್ತಲ್, ಆಲ್ ಇಂಡಿಯಾ ರ್ಯಾಂಕ್ 4416 ಪಡೆದು ಮೈಸೂರು ನಗರ ಟಾಪರ್ ಆಗಿರುವುದು ಜೀವನದ ಅತ್ಯಂತ ಸಂತಸದ ಕ್ಷಣ ಎಂದು ಹೇಳಿದ್ದಾರೆ. ತಮ್ಮ ಯಶಸ್ಸಿಗೆ ಪೋಷಕರ ಬೆಂಬಲ ಮತ್ತು ಆಕಾಶ್ ಸಂಸ್ಥೆಯ ಶಿಕ್ಷಕರ ನಿರಂತರ ಮಾರ್ಗದರ್ಶನ ಕಾರಣವಾಗಿದೆ ಎಂದು ಅವರು ತಿಳಿಸಿದ್ದಾರೆ.
ನಿಯಮಿತ ಮಾಕ್ ಪರೀಕ್ಷೆಗಳು, ಕಾರ್ಯಕ್ಷಮತೆಯ ವಿಶ್ಲೇಷಣೆ, ಸಂದೇಹ ನಿವಾರಣಾ ತರಗತಿಗಳು ಹಾಗೂ ಶಿಸ್ತುಬದ್ಧ ಬೋಧನಾ ವಿಧಾನವು ಪರಿಕಲ್ಪನೆಗಳನ್ನು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಲು ನೆರವಾಯಿತು. ವೈದ್ಯೆಯಾಗುವ ಗುರಿ ಸಾಧಿಸುವ ನಿಟ್ಟಿನಲ್ಲಿ ಈ ಫಲಿತಾಂಶ ಮತ್ತಷ್ಟು ಪ್ರೇರಣೆ ನೀಡಿದೆ ಎಂದು ಅವರು ಹೇಳಿದ್ದಾರೆ.
ಆಕಾಶ್ ಎಜುಕೇಷನಲ್ ಸರ್ವಿಸಸ್ ಲಿಮಿಟೆಡ್ ಮುಖ್ಯ ಶೈಕ್ಷಣಿಕ ಹಾಗೂ ವ್ಯವಹಾರ ವಿಭಾಗದ ಮುಖ್ಯಸ್ಥ ಧೀರಜ್ ಕುಮಾರ್ ಮಿಶ್ರಾ ಮಾತನಾಡಿ, ಧನ್ಯಾ ಅವರ ಸಾಧನೆ ಸಂಸ್ಥೆಗೆ ಹೆಮ್ಮೆಯ ವಿಷಯವಾಗಿದೆ ಎಂದರು. ತಯಾರಿಯ ಅವಧಿಯಲ್ಲಿ ಅವರು ತೋರಿದ ಶಿಸ್ತು, ಪರಿಶ್ರಮ ಮತ್ತು ಕಲಿಕೆಯ ಬದ್ಧತೆ ಈ ಯಶಸ್ಸಿಗೆ ಕಾರಣವಾಗಿದೆ. ಅವರ ಮುಂದಿನ ಶೈಕ್ಷಣಿಕ ಹಾಗೂ ವೃತ್ತಿಜೀವನ ಮತ್ತಷ್ಟು ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.
ಕರ್ನಾಟಕದ ಇತರ ವಿದ್ಯಾರ್ಥಿಗಳೂ ನೀಟ್-ಯುಜಿ 2026ರಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ ಎಂದು ಸಂಸ್ಥೆ ತಿಳಿಸಿದೆ. ಜೋಹಾನ್ ಜಾಬ್ ಅವರು ಆಲ್ ಇಂಡಿಯಾ ರ್ಯಾಂಕ್ 69, ಕೆವಿನ್ ಆಲ್ ಇಂಡಿಯಾ ರ್ಯಾಂಕ್ 299, ಸಿಧಾಂತ್ ವಿನಯ್ ವಿ ಆಲ್ ಇಂಡಿಯಾ ರ್ಯಾಂಕ್ 579 ಹಾಗೂ ಅಭಿರಾಮ್ ಎ.ಪಿ. ಆಲ್ ಇಂಡಿಯಾ ರ್ಯಾಂಕ್ 623 ಪಡೆದು ಗಮನ ಸೆಳೆದಿದ್ದಾರೆ.
ಆಕಾಶ್ ಎಜುಕೇಷನಲ್ ಸರ್ವಿಸಸ್ ಲಿಮಿಟೆಡ್ನ ತರಬೇತಿ ವ್ಯವಸ್ಥೆಯಲ್ಲಿ ಪರಿಣಿತ ಬೋಧಕ ವೃಂದ, ವೈಜ್ಞಾನಿಕವಾಗಿ ರೂಪಿಸಲಾದ ಅಧ್ಯಯನ ಸಾಮಗ್ರಿ, ತಂತ್ರಜ್ಞಾನ ಆಧಾರಿತ ಕಲಿಕೆ, ನಿಯಮಿತ ಮೌಲ್ಯಮಾಪನ, ಕೃತಕ ಬುದ್ಧಿಮತ್ತೆ ಆಧಾರಿತ ಕಾರ್ಯಕ್ಷಮತೆ ವಿಶ್ಲೇಷಣೆ ಹಾಗೂ ವೈಯಕ್ತಿಕ ಮಾರ್ಗದರ್ಶನಕ್ಕೆ ಆದ್ಯತೆ ನೀಡಲಾಗಿದೆ. ದೇಶಾದ್ಯಂತ ತನ್ನ ಶಾಖೆಗಳು ಮತ್ತು ಡಿಜಿಟಲ್ ಕಲಿಕಾ ವೇದಿಕೆಗಳ ಮೂಲಕ ವೈದ್ಯಕೀಯ ಪ್ರವೇಶ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ಸಂಸ್ಥೆ ತರಬೇತಿ ನೀಡುತ್ತಿದೆ.
ಪತ್ರಿಕಾಗೋಷ್ಠಿಯಲ್ಲಿ ಡಾ. ವಿಕ್ರಮ್ ಚಕ್ರವರ್ತಿ, ಸಂಜೀವ್ ಕುಮಾರ್,
ಡಾ.ಶ್ರೀನಿವಾಸ ರೆಡ್ಡಿ, ಕೆ.ಹರಿಕೃಷ್ಣ, ಶ್ರಾವಣಿ, ಮುಬಾರಕ್ ಪಾಷಾ,
ಸುರಜ್ ಡಿ., ಉಪಸ್ಥಿತರಿದ್ದರು.
ಮೈಸೂರು ಶಾಖೆಯ ಸಾಧಕರು
1) ಧನ್ಯಾ ಮಿತ್ತಲ್, ಆಲ್ ಇಂಡಿಯಾ ರ್ಯಾಂಕ್ 4416
2) ಸಮೃದ್ಧಿ ಸುಪ್ರೀಮ್, ಆಲ್ ಇಂಡಿಯಾ ರ್ಯಾಂಕ್ 8088
3) ಮೊಹಮ್ಮದ್ ಮುಸದ್ದಿಕ್ ಎನ್., ಆಲ್ ಇಂಡಿಯಾ ರ್ಯಾಂಕ್ 10421
4)ಕುಶಾಲ ಜೆ. ಆಲ್ ಇಂಡಿಯಾ ರ್ಯಾಂಕ್ 10630
5) ಸಮರ್ಥ್ ಎಸ್., ಆಲ್ ಇಂಡಿಯಾ ರ್ಯಾಂಕ್ 11368
