ಹೆಚ್.ಡಿ.ಕುಮಾರಸ್ವಾಮಿ ಕಟ್ಟಾ ಅಭಿಮಾನಿ ನಂದಿನಿ ಜಗದೀಶ್‌ರಿಂದ ಭರ್ಜರಿ ಪ್ರಚಾರ


೩ ಲಕ್ಷ ಮತಗಳ ಅಂತರದಿಂದ ಹೆಚ್‌ಡಿಕೆ ಗೆಲುವು : ನಂದಿನಿ ಜಗದೀಶ್

ಪಾಂಡವಪುರ : ತಾಲ್ಲೂಕಿನ ಹಿರೇಮರಳಿ ಗ್ರಾಮದಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಪರವಾಗಿ ಅವರ ಕಟ್ಟಾ ಅಭಿಮಾನಿ ಜೆಡಿಎಸ್ ಮಹಿಳಾ ಮುಖಂಡರಾದ ನಂದಿನಿ ಜಗದೀಶ್ ಭರ್ಜರಿ ಪ್ರಚಾರ ನಡೆಸಿದರು.
ಶುಕ್ರವಾರ ಮತದಾನಕ್ಕೆ ಆಗಮಿಸುತ್ತಿದ್ದ ಮಹಿಳಾ ಮತದಾರರನ್ನು ಆಕರ್ಷಿಸಿ ಮೈತ್ರಿ ಅಭ್ಯರ್ಥಿ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಮತ ನೀಡುವಂತೆ ಕೋರುತ್ತಿದ್ದುದು ಕಂಡು ಬಂತು. ಇದಕ್ಕೂ ಮುನ್ನ ಅವರು ಮತದಾರರ ಮನೆ ಮನೆಗೆ ತೆರಳಿ ಜೆಡಿಎಸ್ ಪಕ್ಷದ ಸಾಧನೆ, ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ನಡೆದ ಅಭಿವೃದ್ಧಿಗಳು, ರೈತರ ಸಾಲಮನ್ನಾ ಮುಂತಾದ ವಿಷಯಗಳನ್ನು ಮತದಾರರಿಗೆ ಮನದಟ್ಟು ಮಾಡಿಕೊಡುವ ಮೂಲಕ ಮತಯಾಚನೆ ಮಾಡಿದರು.
ಈ ಸಂದರ್ಭದಲ್ಲಿ ಅವರು ಮಾತನಾಡಿ, ಸೂರ್ಯ, ಚಂದ್ರ ಇರುವುದು ಎಷ್ಟು ಸತ್ಯವೋ ಕುಮಾರಸ್ವಾಮಿ ಗೆಲ್ಲುವುದೂ ಸಹ ಅಷ್ಟೇ ಸತ್ಯ, ಮಂಡ್ಯ ಜಿಲ್ಲೆಯಲ್ಲಿ ಮತದಾರರು ಕುಮಾರಸ್ವಾಮಿ ಅವರ ಪರವಾಗಿದ್ದಾರೆ. ೩ ಲಕ್ಷ ಮತಗಳ ಅಂತರದಿಂದ ಅವರು ಗೆಲುವು ಸಾಧಿಸುತ್ತಾರೆ. ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಯೋಜನೆ ಮಂಡ್ಯ ಜಿಲ್ಲೆಯಲ್ಲಿ ಪರಿಗಣನೆಗೆ ಬರುವುದಿಲ್ಲ. ಕುಮಾರಸ್ವಾಮಿ ಅವರು ಸಂಸದರಾಗಿ ಆಯ್ಕೆಯಾದರೆ ಕೇಂದ್ರದಲ್ಲಿ ಕೃಷಿ ಮಂತ್ರಿಗಳಾಗುತ್ತಾರೆ. ರಾಜ್ಯದ ಕಾವೇರಿ ಸಮಸ್ಯೆ ಮತ್ತು ಮೇಕೆದಾಟು ಯೋಜನೆಗಳನ್ನು ಅವರು ಅನುಷ್ಠಾನ ಮಾಡುತ್ತಾರೆ. ಕೃಷಿ ಅಭಿವೃದ್ಧಿಯಾಗಿ ರೈತರ ಬಾಳು ಹಸನಾಗುತ್ತದೆ. ಹಿರೇಮರಳಿ ಸೇರಿದಂತೆ ತಾಲ್ಲೂಕಿನ ಎಲ್ಲ ಗ್ರಾಮಗಳಿಗೂ ನಾವು ಭೇಟಿ ನೀಡಿ ಕುಮಾರಸ್ವಾಮಿ ಪರವಾಗಿ ಪ್ರಚಾರ ನಡೆಸಿದ್ದೇವೆ. ಎಲ್ಲ ಕಡೆ ಉತ್ತಮ ಸ್ಪಂದನೆ ದೊರಕಿದೆ. ಗ್ರಾಮ ಪಂಚಾಯ್ತಿ ಸದಸ್ಯರಾದ ನವೀನ ಅವರು ನಮ್ಮ ಪ್ರಚಾರಕ್ಕೆ ಎಲ್ಲ ರೀತಿಯ ಸಹಕಾರ ನೀಡುತ್ತಿದ್ದಾರೆ ಎಂದು ಹೇಳಿದರು.


ಬೆಳ್ಳಿ ಗದೆ ವಿತರಣೆ : 

ನಾನು ೨೦ ವರ್ಷದಿಂದಲೂ ಕುಮಾರಸ್ವಾಮಿ ಅವರ ಕಟ್ಟಾ ಅಭಿಮಾನಿಯಾಗಿದ್ದು, ಕಳೆದ ೧೫ ವರ್ಷದ ಹಿಂದೆಯೇ ನಮ್ಮ ಗ್ರಾಮಕ್ಕೆ ಹೆಚ್.ಡಿ.ಕುಮಾರಸ್ವಾಮಿ ಅವರು ಭೇಟಿ ನೀಡಿದ್ದ ಸಂದರ್ಭದಲ್ಲಿ ೨ ಕೆಜಿ ತೂಕದ ಬೆಳ್ಳಿಗದೆ ನೀಡಿ ಗೌರವಿಸಿದ್ದೆ ಎಂದು ನಂದಿನಿ ಹೆಮ್ಮೆಯಿಂದ ಹೇಳಿದರು.
ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡರಾದ ಎಚ್.ಎಸ್.ಬಿ. ಸ್ವಾಮಿ ಗೌಡ, ಶೇಖರ್. ಸುನಿಲ್, ಸುಜಾತ, ಜಯಮ್ಮ, ಹೇಮಲತಾ, ಗೌರಮ್ಮ, ಪುಷ್ಪಾ, ಭಾಗ್ಯ ಮತ್ತಿತರರು ಇದ್ದರು.
ಪುಟ್ಟರಾಜು ಭೇಟಿ ಶ್ಲಾಘನೆ :
ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಶುಕ್ರವಾರ ಹಿರೇಮರಳಿ ಗ್ರಾಮದ ಮತಗಟ್ಟೆಗೆ ಭೇಟಿ ನೀಡಿದರು. ಈ ವೇಳೆ ಬಿಸಿಲೆನ್ನದೆ ಪ್ರಚಾರದಲ್ಲಿ ತೊಡಗಿದ್ದ ನಂದಿನಿ ಜಗದೀಶ್ ಅವರ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದರು. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು