ಕಾವೇರಿ ಹೋರಾಟದ ಜತೆ ಪರ್ಯಾಯ ಬೇಸಾಯ, ನೀರು ನಿರ್ವಹಣೆ ಕುರಿತು ರೈತರಲ್ಲಿ ಜಾಗೃತಿ ಮೂಡಿಸುವುದು ಅಗತ್ಯ : ದರ್ಶನ್ ಪುಟ್ಟಣ್ಣಯ್ಯ

ಹಳೇಬೀಡು, ಅನೂನಹಳ್ಳಿ, ಬೋರಾಪುರ,ಸಂಗಾಪುರ ಗ್ರಾಮದಲ್ಲಿ ೧.೫೦ ಕೋಟಿ ರೂ. ವೆಚ್ಚದ ಕುಡಿಯುವ ನೀರು ಕಾಮಗಾರಿಗೆ ಚಾಲನೆ

ಪಾಂಡವಪುರ : ಕೃಷಿಯಲ್ಲಿ ನೀರು ನಿರ್ವಹಣೆ ಮತ್ತು ಬೇಸಾಯದಲ್ಲಿ ಅಮೂಲಾಗ್ರ ಬದಲಾವಣೆ ಅಗತ್ಯವಾಗಿದ್ದು, ಈ ಬಗ್ಗೆ ರೈತರಲ್ಲಿ ಜಾಗೃತಿ ಮೂಡಿಸುವುದು ಅಗತ್ಯವಾಗಿದೆ ಎಂದು ಶಾಸಕ ದರ್ಶನ್‌ ಪುಟ್ಟಣ್ಣಯ್ಯ ಹೇಳಿದರು.

ತಾಲ್ಲೂಕಿನ ಸಂಗಾಪುರದಲ್ಲಿ ಜಲಜೀವನ್‌ ಮಿಷನ್‌ ಯೋಜನೆಯಡಿ ಕುಡಿಯುವ ನೀರಿನ ಕಾಮಗಾರಿಗೆ ಭೂಮಿಪೂಜೆ ಸಲ್ಲಿಸಿ ಅವರು ಮಾತನಾಡಿ, ಕಾವೇರಿ ನೀರು ವಿಚಾರದಲ್ಲಿ ನಮಗೆ ಕಾನೂನು ಹೋರಾಟ ಮಾತ್ರ ಉಳಿದಿದೆ. ಮುಂಬರುವ ದಿನಗಳಲ್ಲಿ ಕಡಿಮೆ ನೀರಿನಲ್ಲಿ ಕೃಷಿಕಾರ್ಯ ನಡೆಸುವದರ ಬಗ್ಗೆ ರೈತರಲ್ಲಿ ಅರಿವು ಮೂಡಿಸುವ ಕೆಲಸವನ್ನು ರೈತಸಂಘ ಮಾಡಲಿದೆ. ಈ ಬಗ್ಗೆ ರೈತಮುಖಂಡರೊಂದಿಗೆ ಚರ್ಚಿಸಲು ನಾವು ಸಭೆಯನ್ನು ಕರೆದಿದ್ದೇವೆ. ತಮಿಳುನಾಡಿಗೆ ಕಾವೇರಿ ನೀರು ಬಿಡುವ ವಿಚಾರದಲ್ಲಿ ನಮಗೆ ಕಾನೂನು ಹೋರಾಟ ಮಾತ್ರ ಉಳಿದಿದೆ. ಈ ಬಗ್ಗೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ ನಮ್ಮ ಪರಿಸ್ಥಿತಿಯನ್ನು ವೈಜ್ಞಾನಿಕವಾಗಿ ಅರಿವು ಮೂಡಿಸುತ್ತೇವೆ ಎಂದರು.

ಶುಕ್ರವಾರದ ಕರ್ನಾಟಕ ಬಂದ್‌ ಯಶಸ್ವಿಯಾಗಿದೆ.ಆದಾಗ್ಯೂ ನಿತ್ಯ ೩ಸಾವಿರ ಕ್ಯುಸೆಕ್ಸ್‌ ನೀರು ಬಿಡುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಸೂಚಿಸಿದೆ. ನಾನು ಈ ಬಗ್ಗೆ ಕಾನೂನು ಹೋರಾಟ ನಡೆಸುವುದರ ಜತೆಗೆ ನಮ್ಮ ಪರ್ಯಾಯ ಕೃಷಿಯ ಬಗ್ಗೆ ಚಿಂತನೆ ನಡೆಸುವುದರ ಬಗ್ಗೆಯೂ ಯೋಚನೆ ಮಾಡಲಿದ್ದೇವೆ ಎಂದರು.

ಇದಕ್ಕೂ ಮುನ್ನ ಅವರು ತಾಲ್ಲೂಕಿನ ಹಳೇಬೀಡು, ಅನೂನಹಳ್ಳಿ ಬೋರಾಪುರ ಮತ್ತು ಅಂತಿಮವಾಗಿ ಸಂಗಾಪುರ ಗ್ರಾಮದಲ್ಲಿ ಜಲಜೀವನ್‌ ಮಿಷನ್‌ಯೋಜನೆಯಡಿ ಸುಮಾರು ೧೫೦ ಲಕ್ಷ ರೂ.ವೆಚ್ಚದ ಕಾಮಗಾರಿಗಳಿಗೆ ಭೂಮಿಪೂಜೆ ಸಲ್ಲಿಸಿದರು.

 ಈ ಸಂದರ್ಭದಲ್ಲಿಕೆಪಿಸಿಸಿ ಸದಸ್ಯ ಎಚ್‌.ತ್ಯಾಗರಾಜು, ಗ್ರಾಪಂ ಅಧ್ಯಕ್ಷ ಧನಂಜಯ್ಯ, ಹಳೇಬೀಡು ತಿಮ್ಮೇಗೌಡ, ಎಂ.ಬಿ.ಶಿವಣ್ಣ, ಎಇಇ ಕುಮಾರ್‌, ಮಹದೇವಸ್ವಾಮಿ, ಪಿಡಿಓ ರಾಜೇಂದ್ರ, ಗ್ರಾಪಂಸದಸ್ಯರಾದ ಚಿಕ್ಕತಮ್ಮಯ್ಯ, ರಾಧ, ಚನ್ನೇಗೌಡ, ಯದುರಾಜು, ನಟರಾಜು, ನಂಜುಂಡಪ್ಪ, ಶಿವಪ್ಪ, ಇಂದ್ರಕುಮಾರ್‌, ವಿಜಿಕುಮಾರ್‌, ಅಮೃತಿ ರಾಜಶೇಖರ್‌, ಹೆಚ್‌.ಬೋರೇಗೌಡ, ಉಮೇಶ್‌, ಜವರೇಗೌಡ, ಕೋಕಿಲ, ಜ್ಞಾನೇಶ್‌, ಚಂದರ, ಪ್ರಕಾಶ್‌,ರವಿ, ಸಂತೋಷ್‌, ಎನ್‌.ಬಿ.ರಾಮೇಗೌಡ, ಸವಿತ, ಸತೀಶ್‌, ಪುಟ್ಟಸ್ವಾಮಿಗೌಡ, ಕೆ.ರಾಮೇಗೌಡ, ಲೋಕೇಶ್‌, ಸುರೇಶ್‌,ಜಯರಾಮೇಗೌಡ, ಕೆಂಪೇಗೌಡ, ಬೋರೇಗೌಡ, ಮಂಜುನಾಥ್‌, ಸಣ್ಣೇಗೌಡ ಮುಂತಾದವರು ಇದ್ದರು. 

 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು