ಪಾಂಡವಪುರ : ದೇಶಾದ್ಯಂತ ಕನ್ನಡ ಮತ್ತು ಹಿಂದಿ ಭಾಷೆಗಳ ನಾಟಕಗಳಲ್ಲಿ
ನಟಿಸಿರುವ ಖ್ಯಾತ ರಂಗಕರ್ಮಿ ಜಯದೇವರಾವ್ ಅವರು ರಾಜ್ಯಮಟ್ಟದ ʻವಿಠಲಶ್ರೀʼ
ಪ್ರಶಸ್ತಿಗೆ ಭಾಜನರಾಗಿದ್ದಾರೆ. ಬೆಳಗಾವಿಯ ಸಂಕಲ್ಪ ಕ್ರೀಡಾ ಮತ್ತು ಸಮಾಜ ಸೇವಾ ಸಂಘದಿಂದ ನಾಮದೇವ
ಶಿಂಪಿ ಮತ್ತು ಭಾವಸಾರ ಕ್ಷತ್ರಿಯ ಸಮಾಜದ ಸಾಧಕರಿಗೆ ನೀಡಲಾಗುವ ಈ ರಾಜ್ಯ ಮಟ್ಟದ ಪ್ರಶಸ್ತಿಯನ್ನು
ಅಕ್ಟೋಬರ್, ೧ ರಂದು ಭಾನುವಾರ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಬನವಾಸಿಯ ನಾಮದೇವ ಕಲ್ಯಾಣ ಮಂಟಪದಲ್ಲಿ ನಡೆಯುವ ಸಮಾರಂಭದಲ್ಲಿ ಹಿರಿಯ
ಪತ್ರಕರ್ತ ಹರಿಪ್ರಕಾಶ್ ಕೊಣೆಮನೆ ಅವರು ಜಯದೇವರಾವ್ ಅವರಿಗೆ ಪ್ರದಾನ ಮಾಡಲಿದ್ದಾರೆ ಎಂದು ಆಯೋಜಕರಾದ
ಮಂಜುನಾಥ ರೇಳೆಕರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
0 ಕಾಮೆಂಟ್ಗಳು