ಅಂಬರೀಶ್ ಅಭಿಮಾನಿಗಳ ಸಂಘದ ಅಧ್ಯಕ್ಷ ಅಂಬಿ ಸುಬ್ಬಣ್ಣ ಜೆಡಿಎಸ್ ಗೆ ಬೆಂಬಲ
ಏಪ್ರಿಲ್ 24, 2023
ಸಂಸದೆ ಸುಮಲತಾ ದ್ವಂದ್ವ ರಾಜಕೀಯ ನೀತಿಗೆ ಬೇಸರ
ಪಾಂಡವಪುರ: ತಾಲೂಕು ಅಂಬರೀಶ್ ಅಭಿಮಾನಿಗಳ ಸಂಘದ ಅಧ್ಯಕ್ಷ ಅಂಬಿ ಸುಬ್ಬಣ್ಣ
ಶಾಸಕ ಸಿ.ಎಸ್.ಪುಟ್ಟರಾಜು ಅವರಿಗೆ ತಮ್ಮ ಬೆಂಬಲ ಘೋಷಿಸಿದರು. ಪ್ರಸಕ್ತ ವಿಧಾನಸಭಾ ಚುನಾವಣೆಯಲ್ಲಿ ತಾವು ಜೆಡಿಎಸ್ ಪಕ್ಷಕ್ಕೆ ಬೆಂಬಲ
ನೀಡುತ್ತಿದ್ದು, ಮೇಲುಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಶಾಸಕ ಸಿ.ಎಸ್.ಪುಟ್ಟರಾಜು ಅವರ ಅಭಿವೃದ್ಧಿ
ಕಾರ್ಯಗಳನ್ನು ಮೆಚ್ಚಿ ಬೆಂಬಲ ನೀಡುತ್ತಿರುವುದಾಗಿ ತಿಳಿಸಿದರು. ಸಂಸದೆ ಸುಮಲತಾ ಅವರ ದ್ವಂದ್ವ ರಾಜಕೀಯ ನೀತಿ ಬೇಸರ ತಂದಿದೆ. ಮಂಡ್ಯದಲ್ಲಿ
ಬಿಜೆಪಿಗೆ ಬೆಂಬಲ, ಮೇಲುಕೋಟೆಯಲ್ಲಿ ರೈತಸಂಘಕ್ಕೆ ಬೆಂಬಲ ನೀಡುವುದು ಸರಿಯಲ್ಲ. ಯಾವುದಾದರೂ ಒಂದು
ಪಕ್ಷಕ್ಕೆ ಬೆಂಬಲ ನೀಡಬೇಕು. ಅವರು ಸಂಸದರು ಹೇಗೋ ತಮ್ಮ ನಿಲುವು ನಿಭಾಯಿಸುತ್ತಾರೆ. ಆದರೇ, ಕ್ಷೇತ್ರದಲ್ಲಿ
ನಮ್ಮದೇ ಆದ ಅಸ್ತಿತ್ವ ಉಳಿಸಿಕೊಳ್ಳಲು ನಾವು ಸೂಕ್ತ ಅಭ್ಯರ್ಥಿಗೆ ಬೆಂಬಲ ನೀಡಬೇಕಿದೆ ಎಂದರು. ಈ ಕಾರಣಕ್ಕಾಗಿ
ತಾವು ಶಾಸಕ ಸಿ.ಎಸ್.ಪುಟ್ಟರಾಜು ಅವರಿಗೆ ಬೆಂಬಲ ನೀಡುತ್ತಿರುವುದಾಗಿ ಹೇಳಿದರು
0 ಕಾಮೆಂಟ್ಗಳು