ಬೆಟ್ಟದಿಂದ ಜಿಗಿದು ಯುವಕ ಆತ್ಮಹತ್ಯೆ

ಶಾರುಕ್ ಖಾನ್, ಹನೂರು
ಮಹದೇಶ್ವರ ಬೆಟ್ಟ: ಮಾದಪ್ಪನ ದರ್ಶನಕ್ಕೆ ಬಂದಿದ್ದ ಭಕ್ತನೊಬ್ಬ ಇಂದು ಬೆಳಿಗ್ಗೆ ನಾಗಮಲೆಗೆ ತೆರಳಿ ವಾಪಸ್ ಬರುವಾಗ ದಿಢೀರನೇ ಗುಡ್ಡದ ಮೇಲಿಂದ ಜಿಗಿದು ಆತ್ಮಹತ್ಯೆ  ಮಾಡಿಕೊಂಡ ಘಟನೆ ನಡೆದಿದೆ.
.            ಯುವಕನ ಶವ ಸಾಗಿಸುತ್ತಿರುವುದು
ಬೆಂಗಳೂರು ಕೆಂಗೇರಿ ಸಮೀಪ ಮಾರುತಿನಗರದ  ಸುಮಾರು 26 ವರ್ಷದ ಯುವಕ ಆತ್ಮಹತ್ಯೆ ಮಾಡಿಕೊಂಡವನಾಗಿದ್ದು, ಘಟನೆಯಿಂದ ಈತನ ಜತೆಯಲ್ಲಿದ್ದವರು ಆಘಾತಕ್ಕೆ ಒಳಗಾಗಿದ್ದಾರೆ.
ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ.
ಶವವನ್ನು ಮರಣೋತ್ತರ ಪರೀಕ್ಷೆಗೆ ಕಳಿಸಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು