ಬಿ.ರಮೇಶ್
ಮೈಸೂರು ನಗರ
ಪೊಲೀಸ್ ಆಯುಕ್ತ
ಯರಗನಹಳ್ಳಿ ಸತೀಶ-ಚಾಮರಾಜನಗರ
ಜಿಲ್ಲೆಗೆ
ಮಧುಸೂದನ್ @ ಮಧು -ಹಾಸನ ಜಿಲ್ಲೆಗೆ
ಗೆAಡೆ ಮಂಜ-ಕೊಡಗು ಜಿಲ್ಲೆಗೆ
ಕುಮಾರ@ಕಪಾಲಿ-ಚಿತ್ರದುರ್ಗ ಜಿಲ್ಲೆಗೆ
ಮೈಸೂರು: ನಗರದಲ್ಲಿ ಕಾನೂನು ಸುವ್ಯವಸ್ಥೆ ಹದಗೆಡಿಸಿ,
ಅನೇಕ ಹಲ್ಲೆಗಳು, ಕೊಲೆ, ಸುಲಿಗೆ, ದರೋಡೆ ಪ್ರಕರಣಗಳಲ್ಲಿ ಶಾಮೀಲಾಗಿ ಸಾರ್ವಜನಿಕರಲ್ಲಿ ಭಯವನ್ನುಂಟು ಮಾಡುತ್ತಿದ್ದ ನಾಲ್ವರು
ಕುಖ್ಯಾತ ರೌಡಿ ಶೀಟರ್ಗಳನ್ನು ಮೈಸೂರು ನಗರದಿಂದ ೬ ತಿಂಗಳ ಕಾಲ ಗಡಿಪಾರು ಮಾಡಿರುವುದಾಗಿ ಮೈಸೂರು
ನಗರ ಪೊಲೀಸ್ ಆಯುಕ್ತ ಬಿ.ರಮೇಶ್ ಪ್ರಕರಣೆಯಲ್ಲಿ ತಿಳಿಸಿದ್ದಾರೆ.ಸತೀಶ್ ಬಿನ್ ಲೇ. ಸಿದ್ದರಾಮು, ಮಧುಸೂದನ್
@ ಮಧು, ಗೆAಡೆ ಮಂಜ, ಕುಮಾರ@ಕಪಾಲಿ ಗಡಿಪಾರಾಗಿರುವ
ರೌಡಿಗಳು.ಯರಗನಹಳ್ಳಿ ಬಡಾವಣೆ ನಿವಾಸಿಯಾದ
ಸತೀಶ್ ಎಂಬುವನ ಮೇಲೆ ಆಲನಹಳ್ಳಿ ಪೊಲೀಸ್ ಠಾಣೆಯಲ್ಲಿ ರೌಡಿ ಶೀಟ್ ತೆರೆಯಲಾಗಿತ್ತು.
ಈತನ ವಿರುದ್ದ ಆಲನಹಳ್ಳಿ, ವಿದ್ಯಾರಣ್ಯಪುರಂ ಪೊಲೀಸ್ ಠಾಣೆಗಳಲ್ಲಿ ೬ ಪ್ರಕರಣಗಳು ದಾಖಲಾಗಿವೆ. ಈತನನನ್ನು
ಮೈಸೂರು ನಗರದಿಂದ ಮುಂದಿನ ೬ ತಿಂಗಳ ಅವಧಿಗೆ ಚಾಮರಾಜನಗರ ಜಿಲ್ಲೆಗೆ ಗಡಿಪಾರು ಮಾಡಲಾಗಿದೆ.ಮಧುಸೂದನ್@ಮಧು : ನಗರದ ಲಷ್ಕರ್ ಮೊಹಲ್ಲಾ ವೀರನಗೆರೆ, ವಾಟರ್ ಸಪ್ಲೆöÊ ಕ್ವಾಟ್ರಸ್ನ ವಾಸಿ ಮಧುಸೂದನ್@ಮಧು ಆರ್.ಎಸ್@ಪಾರ್ಟಿ ವಿರುದ್ಧ ಲಷ್ಕರ್ ಪೊಲೀಸ್ ಠಾಣೆಯಲ್ಲಿ ರೌಡಿ ಶೀಟ್ ತೆರೆಯಲಾಗಿದ್ದು, ಈತನ ವಿರುದ್ಧ ಲಷ್ಕರ್,ವಿದ್ಯಾರಣ್ಯಪುರಂ, ಉದಯಗಿರಿ ಮತ್ತು ಆಲನಹಳ್ಳಿ ಪೊಲೀಸ್ ಠಾಣೆಗಳಲ್ಲಿ ಒಟ್ಟು ೪ ಪ್ರಕರಣಗಳು ದಾಖಲಾಗಿವೆ.
ಈತನನ್ನು ಮೈಸೂರು ನಗರದಿಂದ ಮುAದಿನ ೬ ತಿಂಗಳ ಅವಧಿವರೆಗೆ ಹಾಸನ ಜಿಲ್ಲೆಗೆ ಗಡಿಪಾರು ಮಾಡಲಾಗಿದೆ.ಮಂಜುನಾಥ @ ಗೆAಡೆ ಮಂಜ: ನಗರದ ನಜರಬಾದ್ ಸಿದ್ದಾಪ್ಪಾಜಿ ದೇವಸ್ಥಾನದ ಹತ್ತಿರದ ಇಟ್ಟಿಗೆಗೂಡು ವಾಸಿಯಾದ ಗೆAಡೆ ಮಂಜನ ವಿರುದ್ಧ ನಜರಬಾದ್
ಪೊಲೀಸ್ ಠಾಣೆಯಲ್ಲಿ ರೌಡಿ ಶೀಟ್ ತೆರೆಯಲಾಗಿದೆ.
ಈತನ ವಿರುದ್ಧ ನಜರಬಾದ್ ಪೊಲೀಸ್ ಠಾಣೆಯಲ್ಲಿ ಒಟ್ಟು ೮ ಪ್ರಕರಣಗಳು ದಾಖಲಾಗಿವೆ. ಈತನನ್ನು ಮೈಸೂರು ನಗರದಿಂದ ಮುAದಿನ ೬ ತಿಂಗಳ ಅವಧಿಗೆ ಕೊಡಗು ಜಿಲ್ಲೆಗೆ ಗಡಿಪಾರು ಮಾಡಲಾಗಿದೆ.ಕುಮಾರ@ಕಪಾಲಿ: ಈತ ವಿದ್ಯಾರಣ್ಯಪುರಂ ಠಾಣಾ ವ್ಯಾಪ್ತಿಯ ಮುನಿಸ್ವಾಮಿನಗರ ನಿವಾಸಿ ಈತನ ವಿರುದ್ಧವೂ
ವಿದ್ಯಾರಣ್ಯಪುರಂ ಪೊಲೀಸ್ ಠಾಣೆಯಲ್ಲಿ ರೌಡಿ ಶೀಟ್ ತೆರೆಯಲಾಗಿದ್ದು,
ಈತನ ವಿರುದ್ಧ ಕೃಷ್ಣರಾಜ ಮತ್ತು ವಿದ್ಯಾರಣ್ಯಪುರಂ ಪೊಲೀಸ್ ಠಾಣೆಗಳಲ್ಲಿ ಒಟ್ಟು ೭ ಪ್ರಕರಣಗಳು ದಾಖಲಾಗಿವೆ. ೨ ಎನ್.ಸಿ.ಆರ್ ಪ್ರಕರಣಗಳು ಮತ್ತು ೨ ಭದ್ರತಾ ಪ್ರಕರಣಗಳು ಇದ್ದು, ಸೂಕ್ತ ತಿಳುವಳಿಕೆ ನೀಡಿ ಮುಕ್ತಾಯಗೊಳಿಸಲಾಗಿತ್ತು.ಈತನನ್ನು ಮೈಸೂರು ನಗರದಿಂದ ೬ ತಿಂಗಳ ಕಾಲ ಚಿತ್ರದುರ್ಗ ಜಿಲ್ಲೆಗೆ ಗಡಿಪಾರು ಮಾಡಲಾಗಿದೆ.ನಾಲ್ವರು ರೌಡಿಗಳೂ ವಿವಿಧ
ಪ್ರಕರಣಗಳಲ್ಲಿ ಜೈಲು ಸೇರಿ ನಂತರ ಷರತ್ತುಬದ್ದ ಜಾಮೀನು ಪಡೆದು ಕಾರಾಗೃಹದಿಂದ ಹೊರ ಬಂದರೂ ಅಪರಾಧ ಕೃತ್ಯಗಳಲ್ಲಿ
ಭಾಗಿಯಾಗಿದ್ದ ಕಾರಣ ಇವರನ್ನು ೬ ತಿಂಗಳ ಕಾಲ ಗಡಿಪಾರು ಮಾಡಲಾಗಿದೆ ಎಂದು ಮೈಸೂರು ನಗರ ಪೊಲೀಸ್ ಆಯುಕ್ತ
ಬಿ.ರಮೇಶ್ ತಿಳಿಸಿದ್ದಾರೆ.
ಮಂಜುನಾಥ @ ಗೆAಡೆ ಮಂಜ: ನಗರದ ನಜರಬಾದ್ ಸಿದ್ದಾಪ್ಪಾಜಿ ದೇವಸ್ಥಾನದ ಹತ್ತಿರದ ಇಟ್ಟಿಗೆಗೂಡು ವಾಸಿಯಾದ ಗೆAಡೆ ಮಂಜನ ವಿರುದ್ಧ ನಜರಬಾದ್
ಪೊಲೀಸ್ ಠಾಣೆಯಲ್ಲಿ ರೌಡಿ ಶೀಟ್ ತೆರೆಯಲಾಗಿದೆ.
ಈತನ ವಿರುದ್ಧ ನಜರಬಾದ್ ಪೊಲೀಸ್ ಠಾಣೆಯಲ್ಲಿ ಒಟ್ಟು ೮ ಪ್ರಕರಣಗಳು ದಾಖಲಾಗಿವೆ.
ನಾಲ್ವರು ರೌಡಿಗಳೂ ವಿವಿಧ
ಪ್ರಕರಣಗಳಲ್ಲಿ ಜೈಲು ಸೇರಿ ನಂತರ ಷರತ್ತುಬದ್ದ ಜಾಮೀನು ಪಡೆದು ಕಾರಾಗೃಹದಿಂದ ಹೊರ ಬಂದರೂ ಅಪರಾಧ ಕೃತ್ಯಗಳಲ್ಲಿ
ಭಾಗಿಯಾಗಿದ್ದ ಕಾರಣ ಇವರನ್ನು ೬ ತಿಂಗಳ ಕಾಲ ಗಡಿಪಾರು ಮಾಡಲಾಗಿದೆ ಎಂದು ಮೈಸೂರು ನಗರ ಪೊಲೀಸ್ ಆಯುಕ್ತ
ಬಿ.ರಮೇಶ್ ತಿಳಿಸಿದ್ದಾರೆ.
0 ಕಾಮೆಂಟ್ಗಳು