ಮೈಸೂರು ನಗರದ ಕಾಲೇಜು ವಿದ್ಯಾರ್ಥಿಗಳಲ್ಲಿ ಹೆಚ್ಚುತ್ತಿರುವ ವ್ಯಸನ : ಮಾದಕ ವಸ್ತುಗಳ ಮಾರಾಟಗಾರರ ವಿರುದ್ಧ ಕ್ರಮಕ್ಕೆ ಒತ್ತಾಯ
ಜನವರಿ 18, 2023
ಮೈಸೂರು : ನಗರದಲ್ಲಿ
ಶಾಲಾ, ಕಾಲೇಜು ವಿದ್ಯಾರ್ಥಿಗಳಿಗೆ ಮಾದಕ ಪದಾರ್ಥಗಳನ್ನುಮಾರಾಟಮಾಡುವಜಾಲ ಹೆಚ್ಚಾಗಿದ್ದು, ಕೂಡಲೇ ಮಾರಾಟಗಾರರನ್ನು
ಬಂಧಿಸುವಂತೆ ವಿವಿಧ ಸಂಘಟನೆಗಳ ಮುಖ್ಯಸ್ಥರು ಪೊಲೀಸ್ ಆಯುಕ್ತ ರಮೇಶ್ ಬಾನೂತ್ ಅವರಿಗೆ ಮನವಿ ಸಲ್ಲಿಸಿದರು. ಭವ್ಯವಾದ ಭವಿಷ್ಯದ
ಕನಸು ಹೊತ್ತ ಅಮಾಯಕ ವಿದ್ಯಾರ್ಥಿಗಳನ್ನುಇಂದು
ಮಾಧಕ ವ್ಯಸನಿಗಳಾಗುತ್ತಿರುವುದು ಆತಂಕದ ವಿಷಯವಾಗಿದ್ದು, ಶ್ರೀಮಂತಮನೆತನದವಿದ್ಯಾರ್ಥಿಗಳ ಜತೆ ಬಡ ವಿದ್ಯಾರ್ಥಿಗಳೂ ಸಹ
ಹೀನಕೃತ್ಯಕ್ಕೆ ಸಿಲುಕುತ್ತಿದ್ದಾರೆ.
ವಿಶ್ವದಲ್ಲಿಯೇಪ್ರವಾಸೋದ್ಯಮ
ಮತ್ತು ಶಿಕ್ಷಣಕ್ಕೆ ಹೆಸರಾದ ಸಾಂಸ್ಕೃತಿಕನಗರಿಮೈಸೂರಿನಲ್ಲಿ ಈ ಕೃತ್ಯ ನಡೆಯುತ್ತಿರುವುದು
ನಗರಕ್ಕೆ ಕಳಂಕವಾಗಿದೆ. ಇದರಿಂದ ದೇಶವಿದೇಶ
ಹಾಗೂ ಹೊರ ರಾಜ್ಯಗಳಿಂದವಿದ್ಯಾಭ್ಯಾಸಕ್ಕಾಗಿಬರುವ ಸಾವಿರಾರು ವಿದ್ಯಾರ್ಥಿಗಳ ಮೇಲೆ
ದುಷ್ಪರಿಣಾಮ ಬೀರಲಿದೆ. ಕೂಡಲೇ ಈ ಬಗ್ಗೆ ಸೂಕ್ತ ಕ್ರಮ ಕೈಗೊಂಡು ಮಾದಕ ಪದಾರ್ಥಗಳ ಮಾರಾಟಗಾರರನ್ನು
ಹಿಡಿದು ಕಾನೂನು ರೀತ್ಯ ಶಿಕ್ಷಿಸಬೇಕೆಂದು ಅವರು ಒತ್ತಾಯಿಸಿದ್ದಾರೆ. ದೇವರಾಜಅರಸುಪ್ರತಿಮೆಪ್ರತಿಷ್ಠಾಪನಸಮಿತಿ ಅಧ್ಯಕ್ಷ ಜಾಕೀರ್ಹುಸೇನ್ ,ಗೌರವಾಧ್ಯಕ್ಷ ಎಂ. ಚಂದ್ರಶೇಖರ್,ಮಾಜಿ ಮಹಾಪೌರ ಪುರುಷೋತ್ತಮ್
, ಎಸ್ಎಸ್ಯುಐ ರಾಜ್ಯ ಕಾರ್ಯದರ್ಶಿ
ಪ್ರಶಾಂತ್ಆರ್ಯ,ಕಮಲಾ
ಅನಂತರಾಮು, ಅರವಿಂದ ಶರ್ಮಾ, ರದಿವುಲ್ಲಖಾನ್,ದ್ಯಾವಪ್ಪನಾಯ್ಕ, ಶಿವಪ್ಪಇದ್ದರು.
0 ಕಾಮೆಂಟ್ಗಳು