ಶಾಗ್ಯದಲ್ಲಿ ಬಸ್ ತಡೆದು ವಿದ್ಯಾರ್ಥಿಗಳಿಂದ ದಿಢೀರ್ ಪ್ರತಿಭಟನೆ
ಜನವರಿ 30, 2023
ಶಾಗ್ಯ ಗ್ರಾಮದಿಂದ
ಹನೂರು, ಕೊಳ್ಳೇಗಾಲಕ್ಕೆ ಸಮರ್ಪಕ ಬಸ್ ವ್ಯವಸ್ಥೆ ಮಾಡಲು ಒತ್ತಾಯ
ಶಾರುಕ್ ಖಾನ್,
ಹನೂರು ಹನೂರು:
ಸಕಾಲಕ್ಕೆ ಸಾರಿಗೆ ಸಂಸ್ಥೆಯ ಬಸ್ಗಳು
ಬರುತ್ತಿಲ್ಲ. ಇದರಿಂದ ನಮಗೆ ಶಾಲಾ ಕಾಲೇಜುಗಳಿಗೆ ಹೋಗಲು ತೊಂದರೆಯಾಗುತ್ತಿದೆ ಎಂದು ಆರೋಪಿಸಿ ನೂರಾರು
ವಿದ್ಯಾರ್ಥಿಗಳು ತಾಲ್ಲೂಕಿನ ಶಾಗ್ಯ ಗ್ರಾಮದಲ್ಲಿ ಕರ್ನಾಟಕರಾಜ್ಯರಸ್ತೆಸಾರಿಗೆಸಂಸ್ಥೆಯ ಬಸ್ ತಡೆದು ಪ್ರತಿಭಟನೆ ನಡೆಸಿದರು. ಹನೂರುತಾಲ್ಲೂಕಿನ ಶಾಗ್ಯಗ್ರಾಮದಬಸ್ನಿಲ್ದಾಣದಲ್ಲಿಜಮಾಯಿಸಿದವಿದ್ಯಾರ್ಥಿಗಳುಬಸ್ತಡೆದುಸಾರಿಗೆ
ಅಧಿಕಾರಿಗಳ ವಿರುದ್ಧ ಆಕ್ರೋಶವ್ಯಕ್ತಪಡಿಸಿದರು. ಶಾಗ್ಯಸೇರಿದಂತೆಸುತ್ತಮುತ್ತಲಿನಗ್ರಾಮಗಳಿಂದದಿನನಿತ್ಯನೂರಾರು ವಿದ್ಯಾರ್ಥಿಗಳು ಹನೂರುಹಾಗೂಕೊಳ್ಳೇಗಾಲದಶಾಲಾಕಾಲೇಜಿಗೆತೆರಳಲುಬರುತ್ತಾರೆ. ಬೆಳಿಗ್ಗೆಯಿಂದಲೂಬಸ್ಗಾಗಿಕಾದುಕುಳಿತರೂ
ಬಸ್ಸಕಾಲಕ್ಕೆಬರುವುದಿಲ್ಲ. ಇದರಿಂದ ನಮ್ಮ ಶಿಕ್ಷಣ ಕಲಿಕೆಗೆ
ಹಿನ್ನಡೆಯಾಗಿದೆ. ತಡವಾಗಿ ಹೋದರೆ, ಶಾಲಾ ಕಾಲೇಜುಗಳಲ್ಲಿ ಸೇರಿಸುವುದಿಲ್ಲ. ಈ ಬಗ್ಗೆ ಸಂಬಂಧಪಟ್ಟಅಧಿಕಾರಿಗಳಿಗೆಮನವಿಸಲ್ಲಿಸಿದರೂ ಅವರು ಯಾವುದೇ ಕ್ರಮಕ್ಕೆ ಮುಂದಾಗದೆ ತಮ್ಮ ಚಾಳಿಯನ್ನುಮುಂದುವರೆಸುತ್ತಿದ್ದಾರೆ. ಪರೀಕ್ಷೆಗಳು
ಹತ್ತಿರ ಬರುತ್ತಿವೆ. ನಮಗೆ ತರಗತಿಗಳು ಮುಖ್ಯವಾಗಿವೆ.ಈ ಸಮಯದಲ್ಲೂಈರೀತಿಮಾಡುವುದುಎಷ್ಟುಸರಿಎಂದುವಿದ್ಯಾರ್ಥಿಗಳುಪ್ರಶ್ನಿಸಿದರು. ಸ್ಥಳಕ್ಕೆ ಸಾರಿಗೆ
ಸಂಸ್ಥೆಯ ಅಧಿಕಾರಿಗಳು ಬರಬೇಕು. ವಿದ್ಯಾರ್ಥಿಗಳ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಬೇಕು. ಅಲ್ಲಿಯ ತನಕ
ನಾವು ಪ್ರತಿಭಟನೆ ಮುಂದುವರಿಸುತ್ತೇವೆ ಎಂದು ಪಟ್ಟು ಹಿಡಿದರು. ಘಟನಾ ಸ್ಥಳಕ್ಕೆ
112 ಪೊಲೀಸ್ ಅಧಿಕಾರಿ ವೆಂಕಟೇಶ್ ಆಗಮಿಸಿ ವಿದ್ಯಾರ್ಥಿಗಳ ಸಮಸ್ಯೆ ಆಲಿಸಿ, ಮೊಬೈಲ್ ಮೂಲಕ ಅಧಿಕಾರಿಗಳಿಗೆ
ಮಾಹಿತಿ ರವಾನಿಸಿದರು. ಈ ವೇಳೆ ಸಾರಿಗೆ
ಅಧಿಕಾರಿಗಳು ವಿದ್ಯಾರ್ಥಿಗಳ ಶಿಕ್ಷಣಕ್ಕೆ ಅನುಕೂಲವಾಗುವಂತೆ ನಿಗದಿತ ಸಮಯದಲ್ಲಿ ಬಸ್ ವ್ಯವಸ್ಥೆ ಮಾಡಲಾಗುವುದು
ಎಂದು ಭರವಸೆ ನೀಡಿದ ಮೇರೆಗೆ ಪ್ರತಿಭಟನೆ ಹಿಂಪಡೆಯಲಾಯಿತು.
0 ಕಾಮೆಂಟ್ಗಳು