ಸೋಮನಹಳ್ಳಿ ಜಿಪಂ ಕ್ಷೇತ್ರ ವ್ಯಾಪ್ತಿಯಲ್ಲಿ ಶಾಸಕ ಡಿ.ಸಿ. ತಮ್ಮಣ್ಣ ನೇತೃತ್ವದಲ್ಲಿ ಜನ ಸಂಪರ್ಕ ಸಭೆ

-ಟಿ.ಬಿ.ಸಂತೋಷ್, ಮದ್ದೂರು

ಮದ್ದೂರು : ತಾಲೋಕಿನ ಸೋಮನಹಳ್ಳಿ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಹಳ್ಳಿಕೆರೆ, ಹುಲಿಕೆರೆ, ಬನ್ನಹಳ್ಳಿ ಕೂಳಗೆರೆ, ಅಣ್ಣಳ್ಳಿದೊಡ್ಡಿ, ಕೊತ್ತಿಪುರ, ಕೊಕ್ಕರೆ ಬೆಳ್ಳೂರು  ಗ್ರಾಮಗಳಲ್ಲಿ ಶಾಸಕ ಡಿ.ಸಿ.ತಮ್ಮಣ್ಣ ಇಂದು ಜನ ಸಂಪರ್ಕ ಸಭೆ ನಡೆಸಿ ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸಿ ಸ್ಥಳದಲ್ಲೇ ಪರಿಹಾರ ಸೂಚಿಸಿದರು.
ನಂತರ ಮಾತನಾಡಿದ ಅವರು, ಮಾಜಿ ಪ್ರಧಾನಿ ಹೆಚ್.ಡಿ  ದೇವೇಗೌಡ ಅವರು ಈ ಭಾಗದ ರೈತರ ಆರ್ಥಿಕ ಅಭಿವೃದ್ಧಿಗಾಗಿ ದೂರದೃಷ್ಟಿಯಿಂದ ಇಗ್ಗಲೂರಿನಲ್ಲಿ ಬ್ಯಾರೇಜ್ ನಿರ್ಮಾಣ ಮಾಡಿ ರೈತರ ಬಾಳಿಗೆ ಬೆಳಕಾಗಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಜೆಡಿಎಸ್ ತಾಲೂಕು ಅಧ್ಯಕ್ಷ ಚಿಕ್ಕತಿಮ್ಮೇಗೌಡ, ಮುಖಂಡರಾದ ಮಾದನಾಯಕನಹಳ್ಳಿ ರಾಜಣ್ಣ, ಕೂಳಗೆರೆ ಶೇಖರ್, ಭೀಮೇಶ್, ಕೆಂಗಲ್ ಗೌಡ, ಮಾರಸಿಂಗನಹಳ್ಳಿ ಶಿವನಂಜಪ್ಪ, ಮಲ್ಲರಾಜು, ತಾಪಂ ಮಾಜಿ ಅಧ್ಯಕ್ಷೆ  ಚೌಡಮ್ಮ, ಗ್ರಾಪಂ ಸದಸ್ಯೆ ದಿವ್ಯ ರಾಮಶೆಟ್ಟಿ, ಸವಿತಾ, ವಕೀಲರಾದ ಶಿವಲಿಂಗೇಗೌಡ  ಮುಂತಾದವರು ಉಪಸ್ಥಿತರಿದ್ದರು. 



 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು