ಮದ್ದೂರು ತಾಲ್ಲೂಕಿನಾದ್ಯಂತ ಕದಲೂರು ಉದಯ್ ಅಭಿಮಾನಿಗಳ ಸಂಘ ಸ್ಥಾಪನೆ

-ಟಿ.ಬಿ.ಸಂತೋಷ, ಮದ್ದೂರು

ಮದ್ದೂರು : ತಾಲೂಕಿನ ಬೊಮ್ಮನದೊಡ್ಡಿ ಹಾಗೂ ತೊರೆಚಾಕನಹಳ್ಳಿ ಗ್ರಾಮಗಳ ಯುವಕರು ತಮ್ಮ ಹೆಸರಿನಲ್ಲಿ ನೂತನವಾಗಿ ಸ್ಥಾಪಿಸಿರುವ ಅಭಿಮಾನಿಗಳ ಸಂಘವನ್ನು ಸಮಾಜ ಸೇವಕ ಕದಲೂರು ಉದಯ್ ಉದ್ಘಾಟಿಸಿದರು 
ಈ ಸಂದರ್ಭದಲ್ಲಿ ಅವರು ಮಾತನಾಡಿ, ತಾಲೂಕಿನ ಜನರ ಕಲ್ಯಾಣಕ್ಕಾಗಿ ಪ್ರಾಮಾಣಿಕವಾಗಿ ಶ್ರಮಿಸುತ್ತಿದ್ದೇನೆ. ಅನೇಕ ಜನರ ಕಷ್ಟ ಸುಖಗಳ ಭಾಗಿಯಾಗಿದ್ದೇನೆ. ಇಲ್ಲಿನ ಅಭಿವೃದ್ಧಿಗೆ ಪೂರಕವಾಗಿ ನಿರಂತರವಾಗಿ ದುಡಿಯುತ್ತೇನೆ. ತಾಲೂಕಿನ ಸರ್ಕಾರಿ ಶಾಲೆಗಳು, ದೇವಾಲಯಗಳ ಅಭಿವೃದ್ಧಿ ಸೇರಿದಂತೆ ಸಂಕಷ್ಟದಲ್ಲಿರುವ ಹಲವಾರು ಕುಟುಂಬಗಳಿಗೆ ನೆರವು ನೀಡಿದ್ದೇನೆ. ಮುಂದೆಯೂ ಈ ಸೇವೆ ಮುಂದುವರಿಸುತ್ತೇನೆ ಎಂದರು.
ಇದೇ ಸಂದರ್ಭದಲ್ಲಿ ಗುರುದೇವರಹಳ್ಳಿ ಗ್ರಾಮದ ಬಳಿ ಅರೇಕಲ್ ದೊಡ್ಡಿ ಗ್ರಾಮದ ರೈತ ಪುಟ್ಟ ಎಂಬವರಿಗೆ ಸೇರಿದ ಎತು   ಆಕಸ್ಮಿಕವಾಗಿ ಸಾವನ್ನಪ್ಪಿದ್ದನ್ನು ಕಂಡು ಸಾಂತ್ವಾನ ಹೇಳಿದ ಉದಯ್ ರೈತ ಪುಟ್ಟ ಅವರಿಗೆ ಆರ್ಥಿಕ ನೆರವು ನೀಡಿದರು.

ಟ್ರಸ್ಟಿಗಳಾದ ಕದಲೂರು ರವಿ, ಗ್ರಾಪಂ ಸದಸ್ಯರಾದ ತಿಮ್ಮೇಗೌಡ,  ಮುಖಂಡರಾದ ಬಸವಲಿಂಗು, ನಟರಾಜ್, ಜವರೆಗೌಡ, ಶಿವರಾಜು, ದೇವರಾಜು, ಶಂಕರೇಗೌಡ, ಗ್ರಾಪಂ ಅಧ್ಯಕ್ಷೆ ಮಹಾಲಕ್ಷ್ಮಿ, ಚನ್ನೇಗೌಡ, ಸಿ.ಎಂ.ಮಲ್ಲಯ್ಯ, ಬಸವೇಗೌಡ, ಬೋರೇಗೌಡ ಪುಟ್ಟಸ್ವಾಮಿ ಇದ್ದರು.



 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು