ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕಾಂಕ್ರಿಟ್ ರಾಜು ಮಾತನಾಡಿ, ಇದು 200 ವರ್ಷದ ಹಳೆಯ ದೇವಾಲಯ. ಶಿಥಿಲವಾಗಿತ್ತು. ನಾವು ಕಳೆದ 7 ವರ್ಷಗಳಿಂದ ಇದರ ಜೀರ್ಣೋದ್ಧಾರ ಮಾಡಿ ಈಗ 7ನೇ ವರ್ಷದ ವಾರ್ಷಿಕೋತ್ಸವ ನಡೆಸುತ್ತಿದ್ದೇವೆ. ಸಂಸದರಾದ ಪ್ರೆತಾಪ್ ಸಿಂಹ ಮತ್ತು ಮೇಯರ್ ಶಿವಕುಮಾರ್ ಅವರು ದೇವಾಲಯಕ್ಕೆ ಬರಲು ಆಹ್ವಾನ ನೀಡಿದ್ದೇವೆ. ಭಕ್ತರ ಸಹಕಾರದೊಂದಿಗೆ ದೇವಾಲಯವನ್ನು ಮತ್ತಷ್ಟು ಅಭಿವೃದ್ಧಿ ಪಡಿಸಿವ ಕಾರ್ಯಕ್ರಮ ಇದೆ. ಇದರೊಂದಿಗೆ ಈ ಭಾಗದ ನೂರಾರು ಮಕ್ಕಳಿಗೆ ನೋಟ್ ಬುಕ್ ವಿತರಣೆ ಮಾಡುವುದರ ಜತೆಗೆ ಮಕ್ಕಳು ಮತ್ತು ಮಹಿಳೆಯರಿಗಾಗಿ ವಿವಿಧ ಆಟಗಳನ್ನು ಏರ್ಪಡಿಸಿ ಬಹುಮಾನ ನೀಡುತ್ತಿದ್ದೇವೆ ಎಂದರು.
0 ಕಾಮೆಂಟ್ಗಳು