ಮೈಸೂರು ಕುರಿಮಂಡಿಯ ಶ್ರೀ ಕರುಮಾರಿಯಮ್ಮ ದೇವಾಲಯದಲ್ಲಿ 40ನೇ ವರ್ಷದ ವಾರ್ಷಿಕೋತ್ಸವ, ಕರಗ ಮೆರವಣಿಗೆಗೆ ಚಾಲನೆ

ವಿಶೇಷ ಪೂಜೆಯಲ್ಲಿ ಕಾಂಗ್ರೆಸ್ ಪಕ್ಷದ ಬೀದಿಬದಿ ವ್ಯಾಪಾರಿಗಳ ಘಟಕದ ಜಿಲ್ಲಾ ಅಧ್ಯಕ್ಷ ಎಂ.ರಸೂಲ್ ಭಾಗಿ


 ಮೈಸೂರು : ನಗರದ ಕುರಿಮಂಡಿ ಬಡಾವಣೆಯಲ್ಲಿ ಶ್ರೀ ಕರುಮಾರಿಯಮ್ಮ ದೇವಾಲಯದಲ್ಲಿ 40ನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ವಿಶೇಷ ಪೂಜೆ ನಡೆದು, ಕರಗ ಮೆರವಣಿಗೆಗೆ ಚಾಲನೆ ನೀಡಲಾಯಿತು.

ಶುಕ್ರವಾರ ಬೆಳಗ್ಗೆ 7 ಗಂಟೆಗೆ ದೇವಾಲಯದಲ್ಲಿ ವಿಶೇಷ ಪೂಜೆ ಪುನಸ್ಕಾರಗಳು ಪ್ರಾರಂಭಗೊಂಡವು. ಶ್ರೀ ಕರುಮಾರಿಯಮ್ಮ ಅವರಿಗೆ ವಿಶೇಷ ಅಲಂಕಾಲ ಮಾಡಲಾಗಿತ್ತು. ಮದ್ಯಾಹ್ನ ಸುಮಾರು 12.30ಕ್ಕೆ ಮಹಾಮಂಗಳಾರತಿ ನಡೆದು ಕರಗ ಮೆರವಣಿಗೆಗೆ ಚಾಲನೆ ನೀಡಲಾಯಿತು. ನೂರಾರು ಭಕ್ತರು ಪೂಜಾ ಕೈಂಕರ್ಯದಲ್ಲಿ ಭಾಗವಹಿಸಿ ಧನ್ಯರಾದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಬೀದಿಬದಿ ವ್ಯಾಪಾರಿಗಳ ಘಟಕದ ಜಿಲ್ಲಾ ಅಧ್ಯಕ್ಷರಾದ ಎಂ.ರಸೂಲ್ ಅವರು ಮಾತನಾಡಿ, ಈ ಹಿಂದೆ 1984ರಲ್ಲಿ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರಾದ ದಕ್ಷಿಣಾಮೂರ್ತಿ ಅವರು ಮೇಯರ್ ಆಗಿದ್ದ ಸಂದರ್ಭದಲ್ಲಿ ಈ ದೇವಾಲಯ ಪ್ರತಿಷ್ಠಾಪನೆ ಮಾಡಲಾಯಿತು. ಈ ದೇವಾಲಯದಲ್ಲಿ ತಮಿಳುನಾಡು ಸಂಸ್ಕøತಿಯ ದೈವಾಚರಣೆಗಳು ವಿಶೇಷವಾಗಿ ಅತ್ಯಂತ ಶ್ರದ್ಧಾ ಭಕ್ತಿಯಿಂದ ನಡೆಯುತ್ತವೆ. ಯಾವುದೇ ಧರ್ಮ, ಜಾತಿ ಬೇಧವಿಲ್ಲದೆ ಈ ಭಾಗದ ಜನರು ಕರಗ ಮಹೋತ್ಸವದಲ್ಲಿ ಮತ್ತು ದೇವಾಲಯದ ಪೂಜಾ ಕೈಂಕರ್ಯಗಳಲ್ಲಿ ಭಾಗವಹಿಸುವುದು ವಿಶೇಷವಾಗಿದೆ ಎಂದರು.

ದಿವಂಗತ ಎಂ.ಆರ್ಮುಗಂ,ವಿ.ಪಿ.ಜಾರ್ಜ್ ಅವರು ಈ ದೇವಾಲಯದ ನಿರ್ಮಾತೃಗಳು ಅವರನ್ನು ಇಂದು ನೆನಪಿಸಿಕೊಳ್ಳಬೇಕು. ಅವರ ಮಕ್ಕಳು ಮತ್ತು ಬಡಾವಣೆಯ ಮುಖಂಡ ನೇತೃತ್ವದಲ್ಲಿ ಈ ಎಲ್ಲ ಪೂಜಾ ಕಾರ್ಯಗಳು ನಡೆಯುತ್ತಿವೆ ಎಂದು ಹೇಳಿದರು.

ಮಹಾಮಂಗಳಾರತಿ ಬಳಿಕ ಕರಗ ಮೆರವಣಿಗೆಗೆ ಚಾಲನೆ ನೀಡಲಾಯಿತು.

ಈ ಸಂದರ್ಭದಲ್ಲಿ ಮೈಸೂರು ಮಹಾನಗರ ಪಾಲಿಕೆಯ ಮಾಜಿ ಸದಸ್ಯರು ಮತ್ತು ಬಡಾವಣೆಯ ಮುಖಂಡರೂ ಆದ ಪ್ರದೀಪ್ ಚಂದ್ರ, ದೇವಾಲಯದ ಮುಖ್ಯಸ್ಥರು ಮತ್ತು ಬಡಾವಣೆಯ ಯಜಮಾನರುಗಳಾದ ಪುಷ್ಪರಾಜ್, ವೇಲು, ದೊರೆ, ಕಾಳೇಗೌಡ, ಪುಷ್ಪರಾಜ್, ಆರ್ಮುಗಂ, ಹರೀಶ್, ಜಯಶೀಲ, ವಿನು ಮತ್ತಿತರರು ಇದ್ದರು.




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು