ಮಂಡ್ಯ ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷರಾಗಿ ಮಂಗಳ ನವೀನ್ ನೇಮಕ
ಮಾರ್ಚ್ 02, 2024
ಮಂಡ್ಯ : ಪಾಂಡವಪುರ ತಾಲ್ಲೂಕು ಪಂಚಾಯ್ತಿ ಮಾಜಿ ಸದಸ್ಯೆ, ಉತ್ತಮ
ಸಂಘಟಕಿ, ಬಿಜೆಪಿ ಹೋರಾಟಗಳ ಮುಂಚೂಣಿ ಕಾರ್ಯಕರ್ತೆ ಮಂಗಳ ನವೀನ್ ಅವರನ್ನು ಭಾರತೀಯ ಜನತಾ ಪಕ್ಷದ
ಮಂಡ್ಯ ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷರನ್ನಾಗಿ ಮಂಡ್ಯ ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಡಾ.ಎನ್.ಎಸ್.ಇಂದ್ರೇಶ್
ನೇಮಕ ಮಾಡಿದ್ದಾರೆ.
ಮಂಡ್ಯ ಜಿಲ್ಲೆಯಲ್ಲಿ ಪಕ್ಷದ ಸಂಘಟನೆಯ ಉದ್ದೇಶದಿಂದ ಹಾಗೂ ಬಿಜೆಪಿ
ರಾಜ್ಯಅಧ್ಯಕ್ಷರಾದಬಿ.ವೈ.ವಿಜಯೇಂದ್ರ ಅವರ ಸೂಚನೆಮೇರೆಗೆಮಂಡ್ಯಜಿಲ್ಲಾ ಮಹಿಳಾಮೋರ್ಚಾಅಧ್ಯಕ್ಷರನ್ನಾಗಿ ಮಂಗಳ ನವೀನ್
ಅವರನ್ನು ನೇಮಕ ಮಾಡಲಾಗಿದೆ ಎಂದು ಡಾ.ಎನ್.ಎಸ್.ಇಂದ್ರೇಶ್ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಮಂಗಳ ನವೀನ್ ಮಾತನಾಡಿ, ನನ್ನ ನೇಮಕಕ್ಕೆ ಕಾರಣರಾದ
ಭಾರತೀಯ ಜನತಾ ಪಕ್ಷದ ರಾಜ್ಯ ಅಧ್ಯಕ್ಷರಾದ ಬಿ.ವೈ.ವಿಜಯೇಂದ್ರ ಹಾಗೂ ರಾಜ್ಯಮಹಿಳಾಮೋರ್ಚಾಅಧ್ಯಕ್ಷರಾದಮಂಜುಳಹಾಗೂ ಜಿಲ್ಲಾ ಅದ್ಯಕ್ಷರಾದ ಡಾ.ಎನ್.ಎಸ್.ಇಂದ್ರೇಶ್
ಅವರಿಗೆ ಧನ್ಯವಾದ ಹೇಳುವುದರ ಜತೆಗೆ ಪಕ್ಷದ ಎಲ್ಲ ಹಿರಿಯ, ಕಿರಿಯ ನಾಯಕರ ಸಲಹೆ ಪಡೆದುಮಂಡ್ಯಜಿಲ್ಲೆಯಲ್ಲಿಪಕ್ಷವನ್ನು ಉತ್ತಮವಾಗಿ ಸಂಘಟನೆ
ಮಾಡುವುದು ಮತ್ತು ಮಂಡ್ಯ ಜಿಲ್ಲೆಯಲ್ಲಿ ಮೈತ್ರಿ ಅಭ್ಯರ್ಥಿಯ ಗೆಲುವುವಿಗೆ ಶ್ರಮಿಸುವುದಾಗಿ ಹೇಳಿದರು.
0 ಕಾಮೆಂಟ್ಗಳು