ಧರ್ಮಗುರು ಮೊಹಮ್ಮದ್ ಅಕ್ಮಲ್ ಕೊಲೆ ಪ್ರಕರಣ : ಕೆಎಂಡಿಸಿ ಅಧ್ಯಕ್ಷ ಬಿ.ಕೆ.ಅಲ್ತಾಫ್ ಖಾನ್, ಪಾಲಿಕೆ ಮಾಜಿ ಸದಸ್ಯ ಬಶೀರ್ ಅಹಮದ್ ಸೇರಿದಂತೆ ಐವರ ವಿರುದ್ಧ ಎಫ್‌ಐಆರ್

ಮೈಸೂರು : ಮುಸ್ಲಿಂ ಧರ್ಮಗುರು ಮೊಹಮ್ಮದ್ ಅಕ್ಮಲ್ ಅವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉದಯಗಿರಿ ಪೊಲೀಸ್ ಠಾಣೆಯಲ್ಲಿ ಕೆಎಂಡಿಸಿ ನೂತನ ಅಧ್ಯಕ್ಷ ಬಿ.ಕೆ.ಅಲ್ತಾಫ್ ಖಾನ್ ಮತ್ತು ಮೈಸೂರು ಮಹಾನಗರ ಪಾಲಿಕೆ ಮಾಜಿ ಸದಸ್ಯ ಬಶೀರ್ ಸೇರಿದಂತೆ ಐದು ಜನರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಎ೧ ಬಶೀರ್ ಮತ್ತು ಎ೨ ಬಿ.ಕೆ.ಅಲ್ತಾಫ್ ಖಾನ್ ಆಗಿದ್ದು, ಕ್ರಮವಾಗಿ ಬಶೀರ್ ಗೆಳೆಯ ಪವೀಜ್ ಎ೩, ಬಶೀರ್ ಸಹೋದರ ಇಬ್ರಾಹೀಂ ಎ೪ ಮತ್ತು ಬಶೀರ್ ಅವರ ಮಗ ಫೈಝಾನ್ ಎ೫ ಆಗಿದ್ದಾರೆ.
ಮೃತ ಅಕ್ಮಲ್ ಪತ್ನಿ ನಾಜೀಯಾ ಅವರು ಉದಯಗಿರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿದ್ದಾರೆ.
ಕಳೆದ ಶುಕ್ರವಾರ ಮಾರ್ಚ್ ೮ರಂದು ರಾತ್ರಿ ಸುಮಾರು ೮.೨೦ಕ್ಕೆ
ರಾಜೀವನಗರದ ೨ನೇ ಹಂತದ ಆರ್ಯ ಬೇಕರಿಯ
ಮುಂಭಾಗ ದುಷ್ಕರ್ಮಿಗಳು ಅಕ್ಮಲ್ ಅವರ ಸ್ಕೂಟರ್ ಅಡ್ಡಗಟ್ಟಿ ಮಾರಕಾಸ್ತ್ರಗಳಿಂದ ತಲೆಯ ಭಾಗಕ್ಕೆ ಹೊಡೆದು
ಕೊಚ್ಚಿ ಕೊಲೆ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು