ನೀರಿನ ತೊಟ್ಟಿಗೆ ಬಿದ್ದಿದ್ದ ಹಸು ರಕ್ಷಿಸಿದ ಅಗ್ನಿಶಾಮಕ ಸಿಬ್ಬಂದಿ

ಶಾರುಕ್ ಖಾನ್, ಹನೂರು
ಹನೂರು: ಪಟ್ಟಣದ 1ನೇ ವಾರ್ಡಿನ ಅಂಬೇಡ್ಕರ್ ನಗರದ ಬೀದಿಯೊಂದರಲ್ಲಿ ನೀರಿನ ತೊಟ್ಟಿಗೆ ಬಿದ್ದು ಒದ್ದಾಡುತ್ತಿದ್ದ ಹಸುವನ್ನು ರಕ್ಷಿಸುವಲ್ಲಿ ಅಗ್ನಿಶಾಮಕ ಸಿಬ್ಬಂದಿಗಳು ಯಶಸ್ವಿಯಾಗಿದ್ದಾರೆ.
ನೀರು ತುಂಬಿದ್ದ ತೊಟ್ಟಿಗೆ ಹಸು ಬಿದ್ದು ಒದ್ದಾಡುತ್ತಿರುವುದನ್ನು ನೋಡಿದ ಅಕ್ಕಪಕ್ಕದ ಮನೆಯವರು ಅಗ್ನಿಶಾಮಕ  ಠಾಣೆಗೆ ವಿಷಯ ಮುಟ್ಟಿಸಿದ್ದರು, ಕೂಡಲೇ ಸ್ಥಳಕ್ಕೆ ಆಗಮಿಸಿದ ಸಿಬ್ಬಂದಿಗಳು ಸಾರ್ವಜನಿಕರ ಸಹಕಾರದೊಂದಿಗೆ  ಕಾರ್ಯಾಚರಣೆ ನಡೆಸಿ ಹಸುವನ್ನು ಮೇಲೆತ್ತಿದರು.
ಈ ಸಂದರ್ಭದಲ್ಲಿ  ಸಿಬ್ಬಂದಿಗಳಾದ ಪ್ರಸನ್ನ ನಾಯಕ್, ಮಹೇಶ್, ಹರ್ಷ, ಜಯ ಪ್ರಕಾಶ್, ಪ್ರವೀಣ್, ಕಾರ್ತಿಕ್ 
 ಹಾಗೂ ಸಾರ್ವಜನಿಕರಾದ ಕೃಷ್ಣ, ಮಹೇಶ್, ಪ್ರಭುಸ್ವಾಮಿ, ಅಜಿತ್ ಹಾಗೂ ಇನ್ನಿತರರು ಇದ್ದರು.



 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು