ಕೊನೆಗೂ ಸೆರೆಯಾದ ನರಭಕ್ಷಕ ಚಿರತೆ : ನಿಟ್ಟುಸಿರು ಬಿಟ್ಟ ಟಿ.ನರಸೀಪುರ ಜನತೆ.

ತಿ.ನರಸೀಪುರ: ಇಬ್ಬರ ಸಾವು, ಹಲವರ ಮೇಲೆ ದಾಳಿ ನಡೆಸಿ, ಮೇಕೆಗಳನ್ನು ಹೊತ್ತೊಯ್ದೆ ಸಾರ್ವಜನಿಕರ ನಿದ್ದೆಗೆಡಿಸಿದ್ದ ನರಭಕ್ಷಕ ಚಿರತೆ ಕೊನೆಗೂ ಅರಣ್ಯ ಇಲಾಖೆಯ ನಿರಂತರ ಕಾರ್ಯಾಚರಣೆಯ ನಂತರ ಬೋನಿಗೆ ಬಿದ್ದಿದೆ.
ತಾಲೂಕಿನ ಮುತ್ತತ್ತಿ ಗ್ರಾಮದ ದಿಲೀಪ್ ಎಂಬುವರ ತೋಟದಲ್ಲಿ ಈ ಚಿರತೆ ಸೆರೆ ಸಿಕ್ಕಿದ್ದು,ಕಳೆದ ಹಲವು ದಿನಗಳಿಂದಲೂ ಗ್ರಾಮದ ಸುತ್ತಲು ಚಿರತೆ ಓಡಾಡುತ್ತಿದ್ದ ಖಚಿತ ಮಾಹಿತಿ ಮೇರೆಗೆ ಅರಣ್ಯ ಇಲಾಖೆಯು   ಭಾಗದಲ್ಲಿ ಚಿರತೆ ಬಂಧನಕ್ಕೆ ಬೋನು ಇರಿಸಿದ್ದರು.

ಬುಧವಾರ ರಾತ್ರಿ 8 ಘಂಟೆ ಸಮಯದಲ್ಲಿ ಚಿರತೆ ಬೋನಿಗೆ ಬಿದ್ದಿದೆ. ಚಿರತೆ ಬಂಧನಕ್ಕೆ ಬೋನಿನಲ್ಲಿ ಕೋಳಿಯನ್ನು ಇರಿಸಿದ್ದು, ಕೋಳಿ ತಿನ್ನಲು ಬಂದ ಚಿರತೆ ಸೆರೆ ಸಿಕ್ಕಿದೆ ಎಂದು ಹೇಳಲಾಗುತ್ತಿದೆ.
ಎರಡೂವರೆ  ವರ್ಷದ ಈ ಚಿರತೆಯು ಮುತ್ತತ್ತಿ ಗ್ರಾಮದ ಭಾಗದಲ್ಲಿ ಬೋನಿಗೆ ಬಿದ್ದಿದ್ದು, ಗ್ರಾಮದ ಜನತೆ ನೀಡಿದ ಮಾಹಿತಿ ಮೇರೆಗೆ   ತೋಟವೊಂದರಲ್ಲಿ ಬೋನು ಇರಿಸಲಾಗಿದ್ದರಿಂದ ಚಿರತೆ ಸೆರೆ ಸಿಕ್ಕಿದೆ.ಮೇಲಧಿಕಾರಿಗಳ ಸಮ್ಮುಖದಲ್ಲಿ ವೈದ್ಯಕೀಯ ತಪಾಸಣೆ ನಂತರ ಚಿರತೆಯನ್ನು ಬಂಡೀಪುರ ಅರಣ್ಯ ಪ್ರದೇಶಕ್ಕೆ ರವಾನಿಸಲಾವುದು
ಎಂದು ಅರಣ್ಯಾಧಿಕಾರಿಗಳು ಹೇಳಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು