ಗುಂಡ್ಲುಪೇಟೆ : ನೀರಸಾಬ್ ಎಂದೇ ಖ್ಯಾತರಾದ ಗುಂಡ್ಲುಪೇಟೆಯ ಹೆಮ್ಮೆಯ ರಾಜಕಾರಣಿ ಪಂಚಾಯತ್ ರಾಜ್ ನಿರ್ಮಾತೃ ಮಾಜಿ ಸಚಿವ ದಿವಂಗತ ಅಬ್ದುಲ್ ನಜೀರ್ ಸಾಹೇಬರ ಏಕಮಾತ್ರ ಪುತ್ರ ಜವಹರ್ ಶಿಕ್ಷಣ ಸಂಸ್ಥೆಯ ಗೌರವಾಧ್ಯಕ್ಷ ಮುನೀರ್ ಅಹಮದ್ ಇಂದು ನಿಧನರಾದರು. ಮೃತರು ಪತ್ನಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ. ಗುರುವಾರ ರಾತ್ರಿ 8.30ಕ್ಕೆ ಗುಂಡ್ಲುಪೇಟೆಯ ಮುಸ್ಲಿಂ ಸ್ಮಶಾನದಲ್ಲಿ ಅಂತ್ಯಸಂಸ್ಕಾರ ನೆರವೇರಿತು. ಮೃತರ ನಿಧನಕ್ಕೆ ನೂರಾರು ಗಣ್ಯರು ಸಂತಾಪ ಸೂಚಿಸಿದ್ದಾರೆ.
0 ಕಾಮೆಂಟ್ಗಳು