ಶಾರುಕ್ ಖಾನ್,
ಹನೂರು ಹನೂರು : ಆನೆ
ದಾಳಿಯಿಂದ ವ್ಯಕ್ತಿಯೊಬ್ಬ ಗಂಭೀರವಾಗಿ ಗಾಯಗೊಂಡಿರುವ ಘಟನೆ ಮಲೆ ಮಹದೇಶ್ವರ ಬೆಟ್ಟದ ಕೊಕ್ಕಬೋರೆಗ್ರಾಮದ ಬಳಿ ಬುಧವಾರ ರಾತ್ರಿ ನಡೆದಿದೆ. ೪೦ ವರ್ಷದ ಪುಟ್ಟಸ್ವಾಮಿಬಿನ್ಬೊಮ್ಮಯ್ಯಗಾಯಗೊಂಡವನಾಗಿದ್ದು, ಈತನನ್ನು ಚಿಕಿತ್ಸೆಗಾಗಿ
ರಾತ್ರಿಯೇ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ರವಾನಿಸಲಾಗಿದೆ. ಮಲೆ ಮಹದೇಶ್ವರ
ಬೆಟ್ಟದಿಂದ ಕೊಕ್ಕಬೋರೆಗ್ರಾಮದಲ್ಲಿರುವತಮ್ಮಮನೆಗೆತೆರಳುವಾಗ ರಾತ್ರಿ ಸುಮಾರು ೭ ಗಂಟೆಗೆ ಗ್ರಾಮದ
ಸಮೀಪ ಆನೆ ದಾಳಿ ನಡೆಸಿದೆ ಎನ್ನಲಾಗಿದ್ದು, ಆನೆ ತುಳಿತದಿಂದ ವ್ಯಕ್ತಿಯ ಕಾಲು ಸಂಪೂರ್ಣ ಗಾಯಗೊಂಡಿದೆ.
0 ಕಾಮೆಂಟ್ಗಳು