ತ್ವರಿತವಾಗಿ ಶಿಸ್ತು ಕ್ರಮಕ್ಕೆ ಒತ್ತಾಯ
ಮೈಸೂರು : ಪ್ರಚೋದನಕಾರಿ ಹೇಳಿಕೆ ನೀಡುತ್ತಾ ಶಾಂತಿ ಸುವ್ಯವಸ್ಥೆಗೆ ಭಂಗ ತರುತ್ತಿರುವುದಲ್ಲದೇ, ಕಾಂಗ್ರೆಸ್ ನಾಯಕರುಗಳ ವಿರುದ್ಧ ವೈಯಕ್ತಿಕ ನಿಂದನೆ ಮಾಡುತ್ತಿದ್ದಾರೆಂದು ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಕಿರಣ್ ಗೌಡ ವಿರುದ್ಧ ಕಾಂಗ್ರೆಸ್ ಪಕ್ಷದ ಕಾನೂನು ಮತ್ತು
ಮಾನವ ಹಕ್ಕುಗಳ ಸಮಿತಿ ಪೊಲೀಸ್ ಉಪ ಆಯುಕ್ತರಿಗೆ ಇಂದು ಸಂಜೆ ದೂರು ನೀಡಿದೆ.
ಸುಮಾರು ಮೂರು ಪುಟಗಳ ದೂರಿನಲ್ಲಿ ಕಿರಣ್ ಗೌಡ
ರಾಜಕೀಯ ಪಕ್ಷದ ಹೆಸರಿನಡಿ, ಕಳೆದ ಒಂದು
ವರ್ಷದಿಂದ ನಿರಂತರವಾಗಿ ಕಾಂಗ್ರೆಸ್ ಮುಖಂಡರ ವಿರುದ್ಧ ವೈಯಕ್ತಿಕ ನಿಂದನೆ ಮಾಡುತ್ತಾ ಕೋಮು ಸೌಹಾರ್ದತೆಯನ್ನು ಕೆಡಿಸುವ, ದ್ವೇಷ, ಪ್ರಚೋದನೆ, ಜಾತಿ ಮತ್ತು ಧರ್ಮಗಳ ನಡುವೆ ವೈಷಮ್ಯ ತರುವಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಆರೋಪಿಸಲಾಗಿದೆ.
ಕಿರಣ್ ಗೌಡ ಅವರ ದುರ್ವರ್ತನೆ ಮಿತಿ ಮೀರಿದೆ. ಈತನ ಹಿನ್ನೆಲೆ ಕೂಡ ಗೂಂಡಾ ಸಂಸ್ಕøತಿಯಿಂದ ಬಂದಿರುವ ವ್ಯಕ್ತಿಯಾಗಿದ್ದು, ಈತನ ಮೇಲೆ ಹಲವಾರು ಪ್ರಕರಣಗಳು ದಾಖಲಾಗಿವೆ. ದಿನಾಂಕ: 16.12.2022 ರಂದು ಪತ್ರಿಕಾ
ಗೋಷ್ಠಿಯಲ್ಲಿ ಕಾಂಗ್ರೆಸ್ ಪಕ್ಷದ ರಾಜ್ಯ ವಕ್ತಾರ ಎಂ.ಲಕ್ಷ್ಮಣ್ ಅವರನ್ನು ವೈಯಕ್ತಿಕವಾಗಿ ನಿಂದಿಸಿ ಬಹಿರಂಗ ಬೆದರಿಕೆ ಒಡ್ಡಿರುತ್ತಾರೆ.
ಅಲ್ಲದೇ ಎಂ.ಲಕ್ಷ್ಮಣ್ ಅವರ ಭಾವಚಿತ್ರವನ್ನು ವಿರೂಪಗೊಳಿಸಿ ಅಶ್ಲೀಲ ಪದಗಳನ್ನು ಉಪಯೋಗಿಸಿ, ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.
ಪಕ್ಷ ಪಕ್ಷಗಳ ನಡುವೆ ಘರ್ಷಣೆ ಉಂಟುಮಾಡುವ
ದುರುದ್ದೇಶದಿಂದ ಎಂ.ಲಕ್ಷ್ಮಣ್ ಅವರ ಮನೆಯ ಮುಂದೆ ಪ್ರತಿಭಟನೆ ಮಾಡುವುದಾಗಿ ಬೆದರಿಕೆ ಒಡ್ಡಿ ದ್ವೇಷದ ರಾಜಕೀಯ ಸಂಘರ್ಷಕ್ಕೆ ದಾರಿ ಮಾಡುತ್ತಿದ್ದು, ಈತನ ಉದ್ಧಟತನ, ರಾಜಕೀಯ ವ್ಯಕ್ತಿಗಳ ವಿರುದ್ಧ ನಿಂದನೆ ಸಮಾಜದ ಸ್ವಾಸ್ಥ್ಯಕ್ಕೆ ಅಪಾಯಕಾರಿಯಾಗಿದ್ದು, ಈತಹ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕೆಂದು ದೂರಿನಲ್ಲಿ ಒತ್ತಾಯಿಸಿಲಾಗಿದೆ.
ಗ್ರಾಮಾಂತರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಿ.ಜೆ.ವಿಜಯಕುಮಾರ್, ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್, ಮುಖಂಡರಾದ ಶಿವಣ್ಣ, ಕಾನೂನು ಮತ್ತು
ಮಾನವ ಹಕ್ಕುಗಳ ಸಮಿತಿ ಅಧ್ಯಕ್ಷ ವಕೀಲ ಪಾಳ್ಯಸುರೇಶ್ ಇನ್ನಿತರರು ಇದ್ದರು.
1 ಕಾಮೆಂಟ್ಗಳು
Pollu lakshman ge idond baki ithu hedrukond sumnirbeku bhaya andre 😂😂 ivella madakhogbeka ...Namma yuva mukhanda Kiran Gowdarige namma bembala sada iruthade entha kanoonu horataku siddha endu helalu ichisuthini
ಪ್ರತ್ಯುತ್ತರಅಳಿಸಿ