ಕಾಮಗಾರಿ ಪರಿಶೀಲಿಸಿ ಗುಣಮಟ್ಟ ಕಾಪಾಡುವಂತೆ ಗುತ್ತಿಗೆದಾರರಿಗೆ ಸಲಹೆ ನೀಡಿದ ಶಾಸಕ ರಾಮದಾಸ್
ನವೆಂಬರ್ 04, 2022
ಮೈಸೂರು : ನಗರದ ವಾರ್ಡ್ ನಂಬರ್ 63ರ ಜೆಪಿ ನಗರದ ಲಾಸ್ಟ್ ಬಸ್ ಸ್ಟಾಪ್ ನಿಂದ ನವೋದಯ ಬಡಾವಣೆಯ ಮೂಲಕ ದಡದಳ್ಳಿ ಮಾರ್ಗವಾಗಿ ಸಂಚರಿಸುವ ಮುಖ್ಯರಸ್ತೆ ಕಾಮಗಾರಿ ಸ್ಥಳಕ್ಕೆ ಶಾಸಕ ರಾಮದಾಸ್ ಇಂದು ದಿಢೀರನೆ ಭೇಟಿ ನೀಡಿ ಗುಣಮಟ್ಟವನ್ನು ಪರಿಶೀಲಿಸಿದರು. ಶಾಸಕರ ಅನುದಾನದಲ್ಲಿ ಲೋಕೋಪಯೋಗಿ ಇಲಾಖೆ ವತಿಯಿಂದ ಅಭಿವೃದ್ಧಿಪಡಿಸುತ್ತಿರುವ ಈ ರಸ್ತೆ ಡಾಂಬರೀಕರಣದ ಡಾಂಬರಿಕರಣ ಮತ್ತು ಮಳೆನೀರು ಚರಂಡಿ ಕಾಮಗಾರಿಯ ಗುಣಮಟ್ಟ ಮತ್ತು ಸಾಂದ್ರತೆಯನ್ನು ಪರಿಶೀಲಿಸಿ ಸಣ್ಣಪುಟ್ಟ ಸಮಸ್ಯೆಯನ್ನು ಸರಿಪಡಿಸಿಕೊಂಡು ಕಾಮಗಾರಿಯನ್ನು ಅತ್ಯಂತ ಗುಣಮಟ್ಟದಲ್ಲಿ ತ್ವರಿತಗತಿಯಲ್ಲಿ ಪೂರ್ಣಗೊಳಿಸಿ ಸಾರ್ವಜನಿಕರ ಸಂಚಾರಕ್ಕೆ ಅನುಕೂಲ ಮಾಡಿಕೊಡುವಂತೆ ಅಧಿಕಾರಿಗಳಿಗೆ ಸೂಚಿಸಿದರು. ನಗರಪಾಲಿಕೆ ಸದಸ್ಯರಾದ ಶಾರದಮ್ಮ, ಸ್ಥಳೀಯ ಮುಖಂಡರಾದ ಈಶ್ವರ್, ನಾಗೇಂದ್ರ, ಶ್ರೀನಿವಾಸ್, ದೇವರಾಜೇಗೌಡ, ಅಕ್ಷಯ್, ರವಿ, ರೇಣುಕಾ, ರೇವತಿ, ನಂದೀಶ್, ರಾಜೀವ್, ಡೈರೆಕ್ಟರ್ ರಾಜು, ರಾಜಣ್ಣ, ಶ್ಯಾಮ್ ಮತ್ತು ಅಧಿಕಾರಿಗಳು ಹಾಜರಿದ್ದರು.
0 ಕಾಮೆಂಟ್ಗಳು