ಕೋರ್ಟ್ ವಿಚಾರಣೆ ಮುಗಿಸಿ ಊರಿಗೆ ಬರುತ್ತಿದ್ದ ವ್ಯಕ್ತಿ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ : ವ್ಯಕ್ತಿಯ ಸ್ಥಿತಿ ಗಂಭೀರ : ಹಲ್ಲೆಗೆ ಜಮೀನು ವಿವಾದ ಕಾರಣ


 ಹುಣಸೂರು : ಜಮೀನು ವಿವಾದ ಹಿನ್ನೆಲೆ ಕೋರ್ಟ್ ಕಲಾಪ ಮುಗಿಸಿ ಬರುತ್ತಿದ್ದ ವ್ಯಕ್ತಿಯ ಮೇಲೆ 7 ಜನ ದುಷ್ಕರ್ಮಿಗಳ ಗುಂಪೊಂದು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ ಘಟನೆ ಹುಣಸೂರು ತಾಲೂಕಿನ ಕಾಡನಕೊಪ್ಪಲು ಗ್ರಾಮದಲ್ಲಿ ನಡೆದಿದೆ.
ವೆಂಕಟೇಶ್ (45) ಹಲ್ಲೆಗೊಳಗಾದ ವ್ಯಕ್ತಿ. ಗಂಭೀರ ಸ್ಥಿತಿಯಲ್ಲಿರುವ ವೆಂಕಟೇಶ್ ಅವರನ್ನು ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. 

ಈ ಹಿಂದೆಯೂ ವೆಂಕಟೇಶ್ ಅವರ ಮೇಲೆ ಇದೇ ವಿಚಾರದಲ್ಲಿ ಎರಡು ಬಾರಿ ಹಲ್ಲೆ ನಡೆದಿದ್ದು, ಇಂದು ಸಹ ನ್ಯಾಯಾಲಯದಲ್ಲಿ ವಿಚಾರಣೆ ಎದುರಿಸಿ ಬೈಕ್ ನಲ್ಲಿ ಕಾಡನಕೊಪ್ಪಲು ಗ್ರಾಮಕ್ಕೆ ಬರುತ್ತಿದ್ದ ವೆಂಕಟೇಶ್ ಮೇಲೆ ರಾಜು, ದಿನೇಶ್, ಸಂಜೀವ್, ರಘು, ಅಣ್ಣಯ್ಯ, ಮೋಹನ್ ಹಾಗೂ ರಮೇಶ್ ರವರು ಅಡ್ಡಗಟ್ಟಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ತೀವ್ರವಾಗಿ ಗಾಯಗೊಂಡ ವೆಂಕಟೇಶ್ ಅವರನ್ನು ಲಾರಿಯಲ್ಲಿ ಆಸ್ಪತ್ರೆಗೆ ಕರೆತರಲಾಗಿದೆ. 

ಹುಣಸೂರು ಟೌನ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು