ಯದುವೀರ್ ಅವರ ಗುರುತು ʼʼಹಸ್ತʼʼ!….ಅಲ್ಲಲ್ಲ…ಅವರ ಗುರುತು ಕಮಲ…!

ಚೊಚ್ಚಲ ಪ್ರಚಾರ ಭಾಷಣದಲ್ಲಿ ಯಡವಟ್ಟು ಮಾಡಿಕೊಂಡ ಮೈವಿ ರವಿಶಂಕರ್‌

ಮೈಸೂರು : ಮೈಸೂರು-ಕೊಡಗು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ಅವರ ಚೊಚ್ಚಲ ಪ್ರಚಾರದಲ್ಲಿ ಭಾಷಣ ಮಾಡುವಾಗ ಯದುವೀರ್‌ ಅವರ ಗುರುತು ಹಸ್ತ…ಅಲ್ಲಲ್ಲ..ಕಮಲದ ಗುರುತಿಗೆ ಓಟು ಕೊಡಿ ಎನ್ನುವ ಮೂಲಕ ಬಿಜೆಪಿ ಹಿರಿಯ ಮುಖಂಡ ಮೈವಿ ರವಿಶಂಕರ್‌ ಯಡವಟ್ಟು ಮಾಡಿಕೊಂಡ ಘಟನೆ ನಡೆಯಿತು.
ನಗರದ ಕ್ಯಾತಮಾರನಹಳ್ಳಿ ಬಡಾವಣೆಯಲ್ಲಿ ಭಾನುವಾರ ಸಂಜೆ ನಡೆದ ಯದುವೀರ್‌ ಅವರ ಚುನಾವಣಾ ಪ್ರಚಾರದ ವೇಳೆ ಈ ಘಟನೆ ನಡೆದಿದ್ದು, ಕೂಡಲೇ ಪಕ್ಕದಲ್ಲೇ ಕುಳಿತಿದ್ದ ಬಿಜೆಪಿ ಮುಖಂಡ ಮಂಜುನಾಥ್‌ ರವಿಶಂಕರ್‌ ಅವರ ಶರ್ಟ್‌ ಎಳೆದು ಎಚ್ಚರಿಕೆ ನೀಡಿದ ಬಳಿಕ ಎಚ್ಚೆತ್ತುಕೊಂಡ ರವಿಶಂಕರ್‌ ನನ್ನ ಬಾಯಲ್ಲಿ ಈ ರೀತಿ ಯಾಕೆ ಬಂತು ಗೊತ್ತಾಗಲಿಲ್ಲ. ಕ್ಷಮಿಸಿ ಕಮಲದ ಗುರುತಿಗೆ ಮತ ನೀಡಿ ಎಂದು ಹೇಳಿ ಕುಳಿತುಕೊಂಡರು.
ಇದಕ್ಕೂ ಮುನ್ನ ಬಿಜೆಪಿ ಅಭ್ಯರ್ಥಿ ಯದುವೀರ್‌ ಅವರು ಗ್ರಾಮದ ಹುಲಿಯಮ್ಮ ದೇವಾಲಯದಲ್ಲಿ ಪೂಜೆ ಸಲ್ಲಿಸಿದರು. ಗ್ರಾಮಸ್ಥರು ಮೆರವಣಿಗೆ ಮೂಲಕ ರಾಜವಂಶಸ್ಥ ಯದುವೀರ್‌ ಅವರನ್ನು ವೇದಿಕೆಗೆ ಕರೆತಂದರು.
ಮಾಜಿ ಮೇಯರ್‌ ಸಂದೇಶ್‌ ಸ್ವಾಮಿ, ಮುಖಂಡರಾದ ಮಂಜುನಾಥ್‌, ಗಿರಿಧರ್‌, ಸು.ಮುರಳಿ, ವಸಂತ್‌ ಕುಮಾರ್‌ ಮುಂತಾದವರು ಇದ್ದರು.




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು