ಸಿದ್ದು ನಿಜಕನಸುಗಳು ಪುಸ್ತಕ ಬಿಡುಗಡೆಗೆ ಹೆಚ್ಚುವರಿ ಸಿಟಿ ಸಿವಿಲ್ ಕೋರ್ಟ್ ತಡೆಯಾಜ್ಞೆ
ಜನವರಿ 09, 2023
ಬೆಂಗಳೂರು: ಮುಂಬರುವ ವಿಧಾನಸಭಾ
ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ರಾಜಕೀಯವಾಗಿ ಹಣಿಯಲು ಸಿದ್ದತೆ
ನಡೆಸಿರುವ ಬಿಜೆಪಿ, ಇಂದು ಸಿದ್ದು ನಿಜಕನಸುಗಳು ಪುಸ್ತಕ ಬಿಡುಗಡೆಗೆ ಸಿದ್ಧತೆ ನಡೆಸಿದ್ದು,
ಬೆಂಗಳೂರು ಹೆಚ್ಚುವರಿ ಸಿಟಿ ಸಿವಿಲ್ ಕೋರ್ಟ್ ಪುಸ್ತಕ ಬಿಡುಗಡೆಗೆ ತಡೆಯಾಜ್ಞೆ ನೀಡಿದೆ. ಸಿದ್ಧರಾಮಯ್ಯ ಅವರ
ಮೇಲೆ ಹಿಂದೂ ಧರ್ಮಾಸ್ತ್ರ ಪ್ರಯೋಗಿಸಲು ಮುಂದಾಗಿರುವ ಬಿಜೆಪಿ ಸಿದ್ದರಾಮಯ್ಯ ಅವರ ರಾಜಕೀಯ
ಶಕ್ತಿಯನ್ನು ಕುಗ್ಗಿಸಲು ಹಲವು ತಂತ್ರಗಳನ್ನು ಅನುಸರಿಸುತ್ತಿದ್ದು, ಇಂದು ಮಧ್ಯಾಹ್ನ ೩ ಗಂಟೆಗೆ
ಬೆಂಗಳೂರಿನಲ್ಲಿ ಸಿದ್ದು ನಿಜಕನಸುಗಳು ಎಂಬ ಪುಸ್ತಕವನ್ನು ಬಿಡುಗಡೆ ಮಾಡಲಿದ್ದು ಅದಕ್ಕೆ
ತಡೆಯಾಜ್ಞೆ ತರಲು ಕಾಂಗ್ರೆಸ್ ಯಶಸ್ವಿಯಾಗಿದೆ. ಒಂದು ವೇಲೆ ಪುಸ್ತಕ ಬಿಡುಗಡೆಯಾದರೂ ಅದರ
ವಿರುದ್ಧ ಭಾರಿ ಪ್ರತಿಭಟನೆ ನಡೆಸಲು ಕುರುಬ ಸಂಘದ ಪದಾಧಿಕಾರಿಗಳು, ಸಿದ್ದರಾಮಯ್ಯ ಅಭಿಮಾನಿಗಳು ಸಿದ್ಧತೆ
ನಡೆಸಿದ್ದರು. ಸಿದ್ಧರಾಮಯ್ಯ ಅವರು
ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ಕೈಗೊಂಡ ಕೆಲವು ನಿರ್ಣಯಗಳು ಹಿಂದೂ ವಿರೋಧಿಯಾಗಿದ್ದವು. ಅವರು
ಟಿಪ್ಪು ಸುಲ್ತಾನನನ್ನು ಹೊಗಳುವ ಮೂಲಕ ಹಿಂದೂ ವಿರೋಧಿ ನಿಲುವನ್ನು ತಳೆದಿದ್ದರು. ಸಿದ್ಧರಾಮಯ್ಯ
ಅವರ ಆಡಳಿತಾವಧಿಯಲ್ಲಿ ಹಿಂದೂಗಳ ಹತ್ಯೆ ನಡೆದಿದೆ ಎಂಬ ಪ್ರಸ್ತಾಪಗಳು ಪುಸ್ತಕದಲ್ಲಿವೆ
ಎನ್ನಲಾಗಿದೆ. ಮಾನನಷ್ಟ ಮೊಕದ್ದಮೆಗೆ
ಸದ್ಧತೆ: ಪುಸ್ತಕ ಬಿಡುಗಡೆ ಮಾಡುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿರುವವಿಪಕ್ಷನಾಯಕಸಿದ್ಧರಾಮಯ್ಯಅವರುಮಾನನಷ್ಟಮೊಕದ್ದಮೆಹೂಡುವುದಾಗಿಬಿಜೆಪಿಗೆಎಚ್ಚರಿಕೆನೀಡಿದ್ದಾರೆ. ಕಾಮಾಲೆಕಣ್ಣಿಗೆಕಾಣೋದೆಲ್ಲಾಹಳದಿಯೇ. ಟಿಪ್ಪುಡ್ರೆಸ್ಹಾಕಿಖಡ್ಗಹಿಡಿದುಕೊಂಡಿದ್ದವರುಯಾರು, ಟಿಪ್ಪುಪುಸ್ತಕಕ್ಕೆಮುನ್ನುಡಿಬರೆದವರುಯಾರು, ಎಲ್ಲರೂ
ಬಿಜೆಪಿ ನಾಯಕರೇ. ಇಂದುನನ್ನತೇಜೋವಧೆಮಾಡಲುಪುಸ್ತಕಬಿಡುಗಡೆಮಾಡುತ್ತಿದ್ದಾರೆ. ಚುನಾವಣೆವೇಳೆಇಂತಹಪುಸ್ತಕತರುತ್ತಿದ್ದಾರೆ. ಕಾನೂನುಪ್ರಕಾರಏನುಮಾಡಲುಆಗುತ್ತದೆ
ಎಂದು ಚರ್ಚಿಸಿ ಕ್ರಮ ಕೈಗೊಳ್ಳುತ್ತೇನೆಎಂದರು.
0 ಕಾಮೆಂಟ್ಗಳು