ಪಾಲಾರ್‌ ಬಾಂಬ್‌ ಸ್ಪೋಟ ಪ್ರಕರಣ: ವೀರಪ್ಪನ್ ಸಹಚರ ಜ್ಞಾನಪ್ರಕಾಶ್ ಬಿಡುಗಡೆ

ಶ್ವಾಸಕೋಶದ ಕ್ಯಾನ್ಸರ್‌ ನಿಂದ ಬಳಲುತ್ತಿರುವ ಜ್ಞಾನಪ್ರಕಾಶ್‌ ಜಾಮೀನಿಗೆ ಸುಪ್ರೀಂ ಕೋರ್ಟ್ ಆದೇಶ

 

ಮೈಸೂರು: ಪಾಲಾರ್ ಬಾಂಬ್ ಸ್ಫೋಟ ಪ್ರಕರಣದ ಪ್ರಮಖ ಆರೋಪಿ ಹಾಗೂ ವೀರಪ್ಪನ್‌ ಸಹಚರ  ಜ್ಞಾನಪ್ರಕಾಶ್ ಅವರು, ಜಾಮೀನಿನ ಮೇಲೆ ಮಂಗಳವಾರ  ಮೈಸೂರು ಕೇಂದ್ರ ಕಾರಾಗೃಹದಿಂದ ಬಿಡುಗಡೆಗೊಂಡರು
ಜ್ಞಾನಪ್ರಕಾಶ್  ಅವರು ಜೀವಾವಧಿ ಶಿಕ್ಷೆಗೆ ಒಳಗಾಗಿದ್ದರು. ಶ್ವಾಸಕೋಶದ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಅವರಿಗೆ ಸುಪ್ರೀಂಕೋರ್ಟ್ ಮಾನವೀಯತೆ ಆಧಾರದ ಮೇಲೆ .26 ರಂದು ಜಾಮೀನು ಮಂಜೂರು ಮಾಡಿತ್ತು.
ಸುಪ್ರೀಂ ಆದೇಶದನ್ವಯ ವಕೀಲ ಬಾಬುರಾಜ್ ಅವರು  ಚಾಮರಾಜನಗರ ಜಿಲ್ಲಾ ಸೆಷನ್ಸ್ ನ್ಯಾಯಾಲಯಕ್ಕೆ ಜ್ಞಾನ ಪ್ರಕಾಶ್ ಬಿಡುಗಡೆಗೆ ಅನುಮತಿ ನೀಡುವಂತೆ ಅರ್ಜಿ ಸಲ್ಲಿಸಿದ್ದರು. ಸೋಮವಾರ ಇಬ್ಬರಿಂದ ಶ್ಯೂರಿಟಿ ಹಾಗೂ ₹ 5 ಲಕ್ಷದ ಬಾಂಡ್ ಅನ್ನು ನ್ಯಾಯಾಲಯ  ಪಡೆದಿತ್ತು. ನಂತರ ಕೇಂದ್ರ ಕಾರಾಗೃಹದ ಮುಖ್ಯ ಸೂಪರಿಂಟೆಂಡೆಟ್ ಅವರಿಗೆ ಜ್ಞಾನ ಪ್ರಕಾಶ್ ಅವರನ್ನು ಬಿಡುಗಡೆ ಮಾಡುವಂತೆ ಕೋರ್ಟ್ ಆದೇಶ ನೀಡಿತ್ತು.
ಜ್ಞಾನಪ್ರಕಾಶ್ ಯಾರು ಗೊತ್ತಾ?
ಚಾಮರಾಜನಗರ ಜಿಲ್ಲೆ ಹನೂರು ತಾಲ್ಲೂಕಿನ ಮಾರ್ಟಳ್ಳಿ ಸಂದನಪಾಳ್ಯದ ಜ್ಞಾನಪ್ರಕಾಶ್, 1993 ಪಾಲಾರ್ ಬಾಂಬ್ ಸ್ಫೋಟ ಪ್ರಕರಣದಲ್ಲಿ ವೀರಪ್ಪನ್, ಸೈಮನ್, ಬಿಲವೇಂದ್ರನ್, ಮೀಸೆಕಾರ ಮಾದಯ್ಯ ಜತೆಗೆ ಭಾಗಿಯಾಗಿದ್ದರು ಎಂದು ಟಾಡಾ ಕಾಯ್ದೆಯಡಿ ಮೈಸೂರಿನ ಟಾಡಾ ನ್ಯಾಯಾಲಯ  1997ರಲ್ಲಿ ಗಲ್ಲು ಶಿಕ್ಷೆ ವಿಧಿಸಿತ್ತು
2014ರಲ್ಲಿ ಸುಪ್ರೀಂಕೋರ್ಟ್ ಗಲ್ಲು ಶಿಕ್ಷೆಯಿಂದ ಜೀವಾವಧಿಗೆ ಇಳಿಸಿ ತೀರ್ಪು ನೀಡಿತ್ತುವೀರಪ್ಪನ್ 2004 .18 ರಂದು ಎನ್ ಕೌಂಟರ್ ನಲ್ಲಿ ಮೃತಪಟ್ಟರೆ, ಜೈಲಿನಲ್ಲಿ ಶಿಕ್ಷೆ‌ ಅನಭವಿಸುತ್ತಿದ್ದ ಸೈಮನ್, ಬಿಲವೇಂದ್ರನ್ ಕೆಲವು ವರ್ಷಗಳ ಹಿಂದೆಯೇ ನಿಧನ ರಾಗಿ ದ್ದಾರೆ. ಮೀಸೆಕಾರ ಮಾದಯ್ಯ ಹಾಗೂ ಜ್ಞಾನಪ್ರಕಾಶ್ ಮಾತ್ರ ಇದ್ದಾರೆ
ಕಳೆದ 29 ವರ್ಷಗಳಿಂದ ಬೆಳಗಾವಿಯ ಹಿಂಡಲಗ ಹಾಗೂ ಮೈಸೂರು ಕಾರಾಗೃಹದಲ್ಲಿ ಶಿಕ್ಷೆ ಅನುಭವಿಸಿದ್ದ 68ವರ್ಷದ ಜ್ಞಾನ ಪ್ರಕಾಶ್, ಒಂದೂವರೆ ವರ್ಷದಿಂದ ಶ್ವಾಸಕೋಶ ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ. ಅವರಿಗೆ ಬೆಂಗಳೂರಿನ ಕಿದ್ವಾಯಿಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಹಿನ್ನೆಲೆಯಲ್ಲಿ ವಕೀಲರಾದ ವಿಕ್ರಂ ಹಾಗೂ ಭಾರತಿ ಅವರು, ಸುಪ್ರೀಂ ಕೋರ್ಟ್ ನಲ್ಲಿ ಜ್ಞಾನ ಪ್ರಕಾಶ್ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡುವಂತೆ ಅರ್ಜಿ ಸಲ್ಲಿಸಿದ್ದರು. ಸುಪ್ರೀಂ ಬಿಡುಗಡೆಗೆ ಪುರಸ್ಕರಿಸಿದೆ.ಎರಡು ವರ್ಷದಿಂದ ಹುಷಾರಿರಲಿಲ್ಲ. ಶ್ವಾಸಕೋಶದಲ್ಲಿ  ಹುಣ್ಣಾಗಿದೆ, ಕ್ಯಾನ್ಸರ್ ಎಂದರು. ಕಿದ್ವಾಯಿ ಆಸ್ಪತ್ರೆಯಲ್ಲಿ ಆರು ಬಾರಿ ಕಿಮೊಥೆರಪಿ ಮಾಡಿದ್ದಾರೆ. ಜೈಲಿಗೆ ಸೇರಿದಾಗ ಮಕ್ಕಳೆಲ್ಲ ಚಿಕ್ಕವರು. ಮೂವರು ಮಕ್ಕಳು ಇದ್ದಾರೆ. ಅವರ ಜತೆಗೆ ಕೊನೆಯ ದಿನಗಳಲ್ಲಿ ಇರುವ ಹಾಗೂ ಚಿಕಿತ್ಸೆ ಪಡೆಯುವ ಅವಕಾಶವನ್ನು ಕೋರ್ಟ್ ನೀಡಿದೆ ಎಂದು ಭಾವುಕರಾದರುಜೈಲಿನಲ್ಲಿ ಮಗ್ಗ ಹಾಗೂ ವಾಚರ್ ಕೆಲಸ ಮಾಡಿದ್ದೆ. ಎಲ್ಲರೂ ಚೆನ್ನಾಗಿ ನೋಡಿಕೊಂಡಿದ್ದಾರೆ. ಕಳೆದ ಎರಡು ವರ್ಷದಿಂದ ಕೆಲಸ ಮಾಡಲು ಆಗುತ್ತಿರಲಿಲ್ಲ' ಎಂದರು

ನಾನು ವೀರಪ್ಪನ್‌ನನ್ನು ನೋಡಿಯೇ ಇಲ್ಲ
ನಾನು ವೀರಪ್ಪನ್‌ನನ್ನು ನೋಡಿಯೇ ಇಲ್ಲ ,ನನಗೂ  ವೀರಪ್ಪನಗೂ ಸಂಬಂಧವಿಲ್ಲ ಎಂದು ಜ್ಞಾನಪ್ರಕಾಶ್ ಹೇಳಿದ್ದಾರೆ .
ನಾನು ಪಾಲಾರ್‌ ಬಾಂಬ್‌ ಸ್ಫೋಟದಲ್ಲಿ ಭಾಗಿಯಾಗಿದ್ದೆ ಎಂದು ನನ್ನನ್ನು ಬಂಧಿಸಿ ಜೈಲಿಗೆ ಹಾಕಿದರು. ಆ ಸ್ಪೋಟಕ್ಕೂ ನನಗೂ ಸಂಬಂಧವೇ ಇಲ್ಲ. ೩೪ ವರ್ಷದವನಿದ್ದಾಗ ನಾನು ಜೈಲುಪಾಲಾದೆ. ೩೦ ವರ್ಷ ಜೈಲು ಶಿಕ್ಷೆ ಅನುಭವಿಸಿದೆ. ನನಗೀಗ ೬೪ ವರ್ಷ. ನನಗೆ ತುಂಬಾ ಅನ್ಯಾಯವಾಗಿ ಹೋಯಿತು. ನಾನು ವೀರಪ್ಪನ್‌ನನ್ನು ನೋಡಿಯೇ ಇಲ್ಲ. ಆದರೆ ಬಡವನಾದ ನನ್ನ ಬಳಿ ಹಣವಿಲ್ಲದೆ ಇದ್ದುದರಿಂದ ನ್ಯಾಯ ಸಿಗಲಿಲ್ಲ. ಹಣವಿಲ್ಲದವನಿಗೆ ನ್ಯಾಯ ಸಿಗುವುದಿಲ್ಲ ಎಂಬ ಮಾತು ನನ್ನ ಪಾಲಿಗೆ ನಿಜವಾಯಿತು ಎಂದು ಜ್ಞಾನಪ್ರಕಾಶ್ ಹೇಳಿದ್ದಾರೆ.
ಹನೂರಿನ ಎಚ್.ನಾಗಪ್ಪ ಮತ್ತು ಜಿ.ರಾಜೂಗೌಡ ಅವರ ನಡುವೆ ನಡೆಯುತ್ತಿದ್ದ ರಾಜಕೀಯ ಜಿದ್ದಾಜಿದ್ದಿಯಲ್ಲಿ ವೀರಪ್ಪನ್‌ ಹೆಸರು ಬಳಸಿಕೊಂಡು ವೋಟ್‌ ಪಡೆಯಲು ಇಬ್ಬರೂ ಹವಣಿಸುತ್ತಿದ್ದರು. ಈ ಸಂದರ್ಭದಲ್ಲಿ ರಾಜಕೀಯ ಲಾಭಕ್ಕಾಗಿ ಪಾಲಾರ್‌ ಬಾಂಬ್‌ ಸ್ಫೋಟ ಪ್ರಕರಣವನ್ನು ಬಳಸಿಕೊಂಡರು. ಅಮಾಯಕರಾದ ನಾನೂ ಸೇರಿದಂತೆ ಹಲವರನ್ನು ಬಂಧಿಸಿ ಜೈಲಿಗೆ ಹಾಕಿದರು. ಆಗ ಕರ್ನಾಟಕದ ಮುಖ್ಯಮಂತ್ರಿಯಾಗಿದ್ದ ಜೆ.ಎಚ್.ಪಟೇಲ್‌ ನಮಗೆ ಜಾಮೀನು ಸಿಗದಿರಲಿ ಎಂಬ ಕಾರಣಕ್ಕೆ ಟಾಡಾ ಕೇಸ್‌ ಹಾಕಿಸಿದ್ದರು. ಹೀಗೆ ರಾಜಕಾರಣಿಗಳು ನಮಗೆ ಮೋಸ ಮಾಡಿದರು ಎಂಬುದು ಜ್ಞಾನಪ್ರಕಾಶ್‌ ಸ್ಪಷ್ಟೀಕರಣ.



 
 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು