ಐತಿಹಾಸಿಕ ಜಾಮಿಯಾ ಮಸೀದಿಯನ್ನು ವಿವಾದಕೇಂದ್ರವಾಗಿಸುತ್ತಿರುವ ಸಂಘಪರಿವಾರ: ಸೂಕ್ತ ಕ್ರಮಕ್ಕೆ ಅಬ್ದುಲ್ ಮಜೀದ್ ಆಗ್ರಹ
ಡಿಸೆಂಬರ್ 12, 2022
ಬೆಂಗಳೂರು: ಪೂಜೆ ಮತ್ತು
ಪ್ರಾರ್ಥನಾ ಸ್ಥಳಗಳ ಕಾಯ್ದೆಯನ್ನು ಉಲ್ಲಂಘಿಸಿ
ಶ್ರೀರಂಗಪಟ್ಟಣದ ಇತಿಹಾಸ
ಪ್ರಸಿದ್ಧ ಜಾಮಿಯಾ
ಮಸೀದಿಯನ್ನು ವಿವಾದವನ್ನಾಗಿಸುತ್ತಿರುವ ಸಂಘಪರಿವಾರ
ಈ ಭಾಗದಲ್ಲಿ ಕೋಮು
ದ್ವೇಷ ಹರಡಿ
ಸೌಹಾರ್ದತೆಗೆ ಧಕ್ಕೆ
ತರುತ್ತಿದೆ. ಈ
ವಿಚಾರದಲ್ಲಿ ಉನ್ನತ ಪೊಲೀಸ್ ಅಧಿಕಾರಿಗಳು ಕಟ್ಟುನಿಟ್ಟಿನ
ಕಾನೂನು ಕ್ರಮ
ಕೈಗೊಳ್ಳಬೇಕು ಎಂದು
ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ
ಆಫ್ ಇಂಡಿಯಾ
(ಎಸ್’ಡಿಪಿಐ)
ರಾಜ್ಯಾಧ್ಯಕ್ಷ ಅಬ್ದುಲ್
ಮಜೀದ್ ಆಗ್ರಹಿಸಿದ್ದಾರೆ.
ಈ ಬಗ್ಗೆ
ಪತ್ರಿಕಾ ಹೇಳಿಕೆ
ಬಿಡುಗಡೆ ಮಾಡಿರುವ
ಅವರು, ಸಂಘ ಪರಿವಾರ ಪೂಜಾ
ಸ್ಥಳಗಳ ಕಾಯ್ದೆಯನ್ನು ಪದೇ ಪದೇ ಉಲ್ಲಂಘನೆ
ಮಾಡುತ್ತಲೇ ಬರುತ್ತಿದೆ. 1991ರ
ಪೂಜಾ ಸ್ಥಳಗಳ
ಕಾಯ್ದೆ ಪ್ರಕಾರ
ಯಾವುದೇ ಪೂಜಾ
ಸ್ಥಳದ ವಿಚಾರದಲ್ಲಿ 1947, ಆಗಸ್ಟ್
15ಕ್ಕೆ ಅನ್ವಯಿಸುವಂತೆ ಯಥಾಸ್ಥಿತಿ
ಕಾಪಾಡಬೇಕಾಗುತ್ತದೆ. ಪೂಜಾ
ಸ್ಥಳಗಳನ್ನು ವಿವಾದವಾಗಿಸುವುದು, ಪರಿವರ್ತಿಸಲು
ಪ್ರಯತ್ನಿಸುವುದು, ಕೆಡವಲು
ಸಂಚು ರೂಪಿಸುವುದು ಅಪರಾಧವಾಗುತ್ತದೆ.
ಇಂತಹ ಕೃತ್ಯಗಳ
ವಿರುದ್ಧ ಪೊಲೀಸರು
ಸ್ವಯಂ ಪ್ರೇರಿತರಾಗಿ ಕೇಸು
ದಾಖಲಿಸಿಕೊಂಡು ಕ್ರಮ
ಕೈಗೊಳ್ಳಬೇಕಾಗುತ್ತದೆ ಎಂದು
ಮಜೀದ್ ತಮ್ಮ
ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಶ್ರೀರಂಗಪಟ್ಟಣದಲ್ಲಿ ಜನರು
ಸೌಹಾರ್ದತೆಯಿಂದ ಬದುಕುತ್ತಿದ್ದಾರೆ. ಆದರೆ
ಶೋಭಾಯಾತ್ರೆ ಹೆಸರಲ್ಲಿ, ಹನುಮ
ಜಯಂತಿಯ ನೆಪದಲ್ಲಿ ಕೋಮು
ಸೌಹಾರ್ದತೆಯನ್ನು ಕದಡಿ
ತನ್ನ ರಾಜಕೀಯ
ಲಾಭಕ್ಕೆ ಪಟ್ಟಣವನ್ನು ಕೋಮುದಳ್ಳುರಿಗೆ
ತಳ್ಳುವ ನೀಚ
ಕೆಲಸಕ್ಕೆ ಸಂಘ
ಪರಿವಾರ ಕೈ
ಹಾಕಿದೆ ಎಂದು
ಆರೋಪಿಸಿದ ಮಜೀದ್,
ಪೊಲೀಸರು ಈ
ಬಗ್ಗೆ ಕಟ್ಟುನಿಟ್ಟಿನ ಕ್ರಮಕ್ಕೆ
ಮುಂದಾಗಬೇಕು, ಆದರೆ
ಸಂಘ ಪರಿವಾರದ
ದ್ವೇಷದ ಕೃತ್ಯಗಳಿಗೆ ಬೆಂಬಲವಾಗಿ
ಸ್ವತಃ ಕೋಮುವಾದಿ ಬಿಜೆಪಿ
ಪಕ್ಷದ ಸರ್ಕಾರವೇ ನಿಂತಿರುವುದರಿಂದ
ಪೊಲೀಸರು ಸ್ವತಂತ್ರವಾಗಿ ಕಾರ್ಯ
ನಿರ್ವಹಿಸಿ ಕಾನೂನು
ಕಾಪಾಡಲು ಸಾಧ್ಯವಾಗುತ್ತಿಲ್ಲ ಎಂದು
ಮಜೀದ್ ಬೇಸರ ವ್ಯಕ್ತಪಡಿಸಿದರು.
ಶ್ರೀರಂಗಪಟ್ಟಣದ ಪ್ರಕರಣದಲ್ಲಿ ಮುಸ್ಲಿಮರ
ಮನೆ ಮೇಲೆ
ಹಾರಿಸಿದ್ದ ಹಸಿರು
ಧ್ವಜವನ್ನು ಕಿತ್ತೆಸೆದು ವಿಕೃತಿ
ಮೆರೆದಿದ್ದ ಸಂಘ
ಪರಿವಾರದ ಸದಸ್ಯನ
ಮೇಲೆ ಪೊಲೀಸರು
ಕ್ರಮ ಕೈಗೊಂಡಾಗ ಪೊಲೀಸರ
ವಿರುದ್ಧವೇ ಸಂಘ
ಪರಿವಾರದ ಗೂoಡಾಗಳು ಪ್ರತಿಭಟನೆ
ನಡೆಸಿ, ಕ್ರಮ
ಕೈಗೊಂಡ ಪೊಲೀಸರ
ವಿರುದ್ಧವೇ ಕ್ರಮ
ಜರುಗಿಸಲಾಗುವುದು ಎನ್ನುವ
ಭರವಸೆಯನ್ನು ಪೊಲೀಸ್
ಉನ್ನತಾಧಿಕಾರಿಗಳಿಂದಲೇ ಪಡೆದುಕೊಂಡಿದ್ದಾರೆ. ಹೀಗಿರುವಾಗ
ಪೊಲೀಸರು ಕ್ರಮ
ಕೈಗೊಳ್ಳಲು ಹಿಂಜರಿಯುವ ಪರಿಸ್ಥಿತಿ
ನಿರ್ಮಾಣವಾಗಿದೆ ಎಂದು
ಅವರು ಪ್ರಕಟಣೆಯಲ್ಲಿ ಹೇಳಿದ್ದಾರೆ.
ಬಿಜೆಪಿ ಸರ್ಕಾರ
ತನ್ನ ರಾಜಕೀಯ
ಕುತಂತ್ರಗಳನ್ನು ಬದಿಗೆ
ಸರಿಸಿ ಪೂಜಾ
ಸ್ಥಳಗಳ ಕಾಯ್ದೆ
ಅನುಗುಣವಾಗಿ ಸಂವಿಧಾನ
ಬದ್ಧವಾಗಿ ನಡೆದುಕೊಳ್ಳಬೇಕು ಎಂದು
ಅಬ್ದುಲ್ ಮಜೀದ್
ಅವರು ತಮ್ಮ
ಹೇಳಿಕೆಯ ಮೂಲಕ
ಸರ್ಕಾರವನ್ನು ಒತ್ತಾಯಿಸಿದ್ದಾರೆ.
0 ಕಾಮೆಂಟ್ಗಳು