ಕಟ್ಟೆಮಳಲವಾಡಿ ಐಓಬಿ ಬ್ಯಾಂಕಿನಲ್ಲಿ 5 ಲಕ್ಷ ರೂ. ಸಾಲಕ್ಕೆ ಹೆದರಿ ಯುವ ರೈತ ಆತ್ಮಹತ್ಯೆ
ನವೆಂಬರ್ 08, 2022
ಹುಣಸೂರು : ಸಾಲಬಾಧೆ ತಾಳಲಾರದೆ ಯುವ ರೈತನೊಬ್ಬ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ತಾಲ್ಲೂಕಿನ ಹನಗೋಡು ಸಮೀಪದ ಕಿರಂಗೂರು ಗ್ರಾಮದಲ್ಲಿ ನಡೆದಿದೆ. ಗ್ರಾಮದ ರಾಮು.ಕೆ.ಬಿ (38) ಮೃತ ರೈತ. ಮೃತ ರಾಮು ತಮ್ಮ ಜಮೀನಿನಲ್ಲಿ ಮುಸುಕಿನ ಜೋಳ, ರಾಗಿ ಮತ್ತು ಶುಂಠಿ ಬೆಳೆದಿದ್ದು, ಬೇಸಾಯಕ್ಕೆಂದು ತಂದೆ ಬಸವೇಗೌಡ ಹೆಸರಿನಲ್ಲಿ ಕಟ್ಟೆಮಳಲವಾಡಿ ಐ.ಓ.ಬಿ ಬ್ಯಾಂಕ್ ನಲ್ಲಿ 5 ಲಕ್ಷ ಸಾಲ ಮಾಡಿದ್ದರು. ಬೆಳೆಯಲ್ಲಿ ನಷ್ಟ ಉಂಟಾದ ಹಿನ್ನೆಲೆಯಲ್ಲಿ ಮತ್ತು ಅನಾರೋಗ್ಯ ನಿಮಿತ್ತ ಮೈಸೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಚಿಕಿತ್ಸೆಗೂ ಹಣ ಹೊಂದಿಸಲಾಗದೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೃತರ ಸಹೋದರ ಶಿವು ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮೃತರಿಗೆ ಪತ್ನಿ, ಏಳು ವರ್ಷದ ಗಂಡು ಮಗು ಮತ್ತು ಐದು ವರ್ಷದ ಹೆಣ್ಣು ಮಗು ಇದ್ದಾರೆ. ಎಂ.ಡಿ.ಸಿ.ಸಿ ಬ್ಯಾಂಕ್ ಅಧ್ಯಕ್ಷ ಜಿ.ಡಿ.ಹರಿಶ್ ಗೌಡ ಮೃತರ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದ್ದಾರೆ.
0 ಕಾಮೆಂಟ್ಗಳು