ಶ್ರೀರಂಗಪಟ್ಟಣ: ಕಳೆದ ಮೂರು ತಿಂಗಳಿನಿಂದ ವಿಶ್ವ ವಿಖ್ಯಾತ
ಕೃಷ್ಣರಾಜಸಾಗರ ಜಲಾಶಯದ ಬೃಂದಾವನ ಗಾರ್ಡನ್ ಪೊದೆಗಳಲ್ಲಿ ಸೇರಿಕೊಂಡು ಅರಣ್ಯಾಧಿಕಾರಿಗಳಿಗೆ ತಲೆನೋವಾಗಿ
ಪರಿಣಮಿಸಿದ್ದ ಚಿರತೆ ಕೊನೆಗೂ ಬೋನಿಗೆ ಬಿದ್ದಿದೆ. ಬೃಂದಾವನಗಾರ್ಡನ್ಬಳಿಯಉತ್ತರದ ಗೇಟ್ಬಳಿಯವಿಸಿನಾಲೆಹತ್ತಿರಕಳೆದಮೂರುತಿಂಗಳಹಿಂದೆಇರಿಸಿದ್ದಬೋನ್ನಲ್ಲಿಚಿರತೆಸೆರೆಸಿಕ್ಕಿದ್ದು,ಸುಮಾರು 5 ವರ್ಷದಹೆಣ್ಣುಚಿರತೆಎಂದು ತಿಳಿದುಬಂದಿದೆ. ಇಂದು ಬೆಳಿಗ್ಗೆ ಸುಮಾರು
೫ ಗಂಟೆಗೆ ಕರ್ನಾಟಕ ರಾಜ್ಯಕೈಗಾರಿಕಾಭದ್ರತಾಪಡೆಯವೃತ್ತನಿರೀಕ್ಷಕಸಂತೋಷ್ಅವರುಚಿರತೆ ಸೆರೆ ಸಿಕ್ಕಿರುವುದನ್ನು ಗಮನಿಸಿ ಅರಣ್ಯಾಧಿಕಾರಿಗಳಿಗೆ ಮಾಹಿತಿ
ನೀಡಿದರು. ಕಳೆದ ಅಕ್ಟೋಬರ್ 21ರಿಂದನಾಲ್ಕುಬಾರಿಚಿರತೆಕಾಣಿಸಿಕೊಂಡಿದ್ದು ಸುರಕ್ಷತೆಯಕಾರಣದಿಂದಕಾವೇರಿನೀರಾವರಿನಿಗಮಕಳೆದ ನವೆಂಬರ್
೬ ರಿಂದ ಸುಮಾರು ಒಂದು ತಿಂಗಳ ಕಾಲ ಪ್ರವಾಸಿಗರಿಗೆಪ್ರವೇಶನಿರ್ಬಂಧಹೇರಿತ್ತು. ಅರಣ್ಯಇಲಾಖೆಯವರುಚಿರತೆಸೆರೆಗೆಕಾರ್ಯಾಚರಣೆಗೆ
ಮುಂದಾಗಿದ್ದರು. ಬೃಂದಾವನದಲ್ಲಿಚಿರತೆಕಾಣಿಸಿಕೊಂಡದಿನದಿಂದಲೂಅರಣ್ಯಇಲಾಖೆಬೃಂದಾವನದಲ್ಲಿಚಿರತೆಸೆರೆಗೆ ಕಾರ್ಯಾಚರಣೆನಡೆಸಿತ್ತು. 8 ಕಡೆಬೋನ್ಇಟ್ಟಿದ್ದರೂ ಚಿರತೆಮಾತ್ರಬೋನಿಗೆಬೀಳುತ್ತಿರಲಿಲ್ಲ.
ಚಿರತೆಪತ್ತೆಗೆ 60 ಕ್ಕೂಹೆಚ್ಚುಕಡೆಟ್ರ್ಯಾಪ್ ಕ್ಯಾಮರಾಅಳವಡಿಸಲಾಗಿತ್ತು. ಒಂದೆರಡುಕಡೆಸಿಸಿಟಿವಿಯಲ್ಲಿಚಿರತೆಕಾಣಿಸಿಕೊಂಡಿತ್ತು.
ಇದರಿಂದಅರಣ್ಯಇಲಾಖೆಯಅಧಿಕಾರಿಮತ್ತುಸಿಬ್ಬಂದಿ ಹೈರಾಣಾಗಿದ್ದರು. ಸ್ಥಳೀಯರ ಮಾಹಿತಿ ಪ್ರಕಾರ ಈ ಭಾಗದಲ್ಲಿ ಇನ್ನೂ ಎರಡು ಚಿರತೆಗಳಿವೆ ಎನ್ನಲಾಗಿದ್ದು,
ಬೋನ್ಗಳನ್ನು ಮತ್ತೆ ಇಡಲಾಗುತ್ತದೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.
0 ಕಾಮೆಂಟ್ಗಳು