ಅಶೋಕಾಪುರಂ ಪೊಲೀಸರಿಂದ ಕಳ್ಳನ ಬಂಧನ: 18.16 ಲಕ್ಷ ಮೌಲ್ಯದ ಚಿನ್ನಾಭರಣ ವಶ
ಅಕ್ಟೋಬರ್ 13, 2022
305 ಗ್ರಾಂ ಚಿನ್ನಾಭರಣ, 1200 ಗ್ರಾಂ ಬೆಳ್ಳಿ, ಬೈಕ್ ಮತ್ತು ಕಾರು ವಶಕ್ಕೆ
ಮೈಸೂರು : ನಗರದ ಅಶೋಕಪುರಂ ಪೊಲೀಸರು ಒಬ್ಬ ಖತರ್ನಾಕ್ ಮನೆಗಳ್ಳ ಮತ್ತು ಸರಗಳ್ಳನನ್ನು ಬಂಧಿಸಿ 18,16,500 ರೂ. ಬೆಲೆ ಬಾಳುವ 305 ಗ್ರಾಂ ಚಿನ್ನದ ಆಭರಣಗಳು, 1200 ಗ್ರಾಂ ತೂಕದ ಬೆಳ್ಳಿಯ ಪದಾರ್ಥಗಳು ಹಾಗೂ ಕೃತ್ಯಕ್ಕೆ ಬಳಸಿದ ಬೈಕ್ ಮತ್ತು ಕಾರನ್ನು ವಶಕ್ಕೆ ಪಡೆದಿದ್ದಾರೆ. ಠಾಣಾಯಲ್ಲಿ ದಾಖಲಾಗಿದ್ದ ಕನ್ನ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಮತ್ತು ಮಾಲು ಪತ್ತೆಗಾಗಿ ಕೃಷ್ಣರಾಜ ವಿಭಾಗದ ಅಪರಾಧ ಪತ್ತೆದಳ ಹಾಗೂ ಅಶೋಕಪುರಂ ಠಾಣೆಯ ಸಿಬ್ಬಂದಿಗಳ ವಿಶೇಷ ತಂಡ ಸೆ.27 ಒಬ್ಬ ಆರೋಪಿಯನ್ನು ದಸ್ತಗಿರಿ ಮಾಡಿ ವಿಚಾರಣೆ ನಡೆಸಿದಾಗ ಆರೋಪಿಯು ತಾನು ಇತರೆ ತಲೆ ಮರೆಸಿಕೊಂಡಿರುವ ಇಬ್ಬರು ಆರೋಪಿಗಳ ಜೊತೆಗೂಡಿ ಮೈಸೂರು ನಗರ ಹಾಗೂ ಮಂಡ್ಯ ಜಿಲ್ಲೆ ವ್ಯಾಪ್ತಿಯಲ್ಲಿ ಮನೆಕಳ್ಳತನ ಮತ್ತು ಸರಗಳ್ಳತನ ಮಾಡಿರುವುದಾಗಿ ತಿಳಿಸಿದ್ದನು. ಈ ಪತ್ತೆ ಕಾರ್ಯದಿಂದ ಅಶೋಕಪುರಂ, ಸರಸ್ವತಿಪುರಂ, ಅಲನಹಳ್ಳಿ, ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ಟೌನ್ ಪೊಲೀಸ್ ಠಾಣೆ, ಪಾಂಡವಪುರ ಟೌನ್ ಪೊಲೀಸ್ ಠಾಣೆಯ ಮನೆ ಮತ್ತು ಸರಗಳ್ಳತನದ ಪ್ರಕರಣಗಳು ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಡಿಸಿಪಿ ಎಂ.ಎಸ್. ಗೀತ ಮಾರ್ಗದರ್ಶನ, ಎಸಿಪಿ ಎಸ್.ಇ, ಗಂಗಾಧರಸ್ವಾಮಿ ನೇತೃತ್ವದಲ್ಲಿ ಸರಸ್ವತಿಪುರಂ ಮತ್ತು ಅಶೋಕಪುರಂ ಠಾಣೆಯ ಇನ್ಸ್ಪೆಕ್ಟರ್ ಸಿ.ಎಂ.ರವೀಂದ್ರ, ಎಸ್ಐ ಎಂ.ಕೆ.ಸ್ಮಿತಾ, ಸಿಬ್ಬಂದಿಗಳಾದ ಪಿ.ಜೆ.ರಾಜು, ನಾರಾಯಣಶೆಟ್ಟಿ, ಲೋಕೇಶ, ಹೆಚ್.ಜೆ, ಗಿರೀಶ್, ಮಹದೇವಯ್ಯ, ಬಸವರಾಜ ಮುನ್ಯಾಳ್, ಮಹೇಶ, ಹಾಗೂ ಕೃಷúರಾಜ ವಿಭಾಗದ ಎಸಿಪಿ ಸ್ಕ್ವಾಡ್ ಸಿಬ್ಬಂದಿಗಳಾದ ಮೋಹನ್ಕುಮಾರ್, ಸಾಗರ್, ಸುರೇಶ, ಹರೀಶ, ಮೇಘ್ಯಾನಾಯಕ್, ವೆಂಕಟೇಶ್, ಶ್ರೀನಿವಾಸ್, ಸೋಮಶೇಖರ್, ಹರೀಶ ರವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ಪತ್ತೆ ಕಾರ್ಯವನ್ನು ಮೈಸೂರು ನಗರದ ಪೊಲೀಸ್ ಆಯುಕ್ತ ಡಾ. ಚಂದ್ರಗುಪ್ತ ಪ್ರಶಂಸಿಸಿರುತ್ತಾರೆ.
0 ಕಾಮೆಂಟ್ಗಳು